ಬೆಂಗಳೂರು : ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಜಿ.ಕೃಷ್ಣಮೂರ್ತಿ ಅವರು ಕರೊನಾಗೆ ಬಲಿಯಾಗಿದ್ದಾರೆ.
59 ವರ್ಷ ವಯಸ್ಸಾಗಿದ್ದ ಕೃಷ್ಣಮೂರ್ತಿ ಅವರಿಗೆ ಏಪ್ರಿಲ್ 19 ರಂದು ಕರೊನಾ ಪಾಸಿಟೀವ್ ಬಂದಿತ್ತು. ಸಕ್ಕರೆ ಖಾಯಿಲೆ ಇದ್ದ ಕಾರಣ ಅವರನ್ನು ಚಿಕಿತ್ಸೆಗಾಗಿ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಡುವೆ ಇಂದು ಹೃದಯಾಘಾತವಾಗಿ ಕೃಷ್ಣಮೂರ್ತಿ ಅವರು ಸಾವಪ್ಪಿದ್ದಾರೆ.
ದಿವಂಗತ ಕೃಷ್ಣಮೂರ್ತಿ ಅವರು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ರೋಗಿ ಕುಳಿತುಕೊಳ್ಳಲೂ ಅವಕಾಶವಿಲ್ಲ ! ಫುಟ್ಪಾತ್ ಮೇಲೆ ಮಲಗಿದ ಮಹಿಳೆ !