More

    ‘ಧರಣಿ ಮಂಡಲ’ ತಂಡದವರಿಂದ ಹೊಸ ಚಿತ್ರ – ‘ಕೆಎ 15’

    ಬೆಂಗಳೂರು: ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿತ್ತು ನವೀನ್ ಶಂಕರ್ ಅಭಿನಯದ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ. ಈಗ ಈ ತಂಡದ ಬಹಳಷ್ಟು ಕಲಾವಿದರು ಮತ್ತು ತಂತ್ರಜ್ನರು ಸೇರಿಕೊಂಡು ಇನ್ನೊಂದು ಹೊಸ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಹೆಸರು ‘ಕೆಏ 15’.

    ಇದನ್ನೂ ಓದಿ: ಬಾಲಾಜಿ ಫೋಟೋ ಸ್ಟುಡಿಯೋದಿಂದ ‘ಪುಗಸಟ್ಟೆ’ ಹಾಡು ಬಂತು …

    'ಧರಣಿ ಮಂಡಲ' ತಂಡದವರಿಂದ ಹೊಸ ಚಿತ್ರ - 'ಕೆಎ 15'ಇತ್ತೀಚೆಗೆ ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಆಗಿದೆ. ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ನಾಯಕನಾಗಿದ್ದ ನವೀನ್ ಶಂಕರ್​ ಈ ಸಮಾರಂಭಕ್ಕೆ ಬಂದು ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ. ಆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಸಂತೋಷ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರೆ, ಆ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಯಶ್​ ಶೆಟ್ಟಿ ಮತ್ತು ಸಿದ್ದು ಮೂಲಿಮನಿ ಈ ಚಿತ್ರದಲ್ಲೂ ನಟಿಸುತ್ತಿದ್ದಾರೆ.

    ‘ಕೆಎ 15’ ಕಥೆ ಏನು ಎಂದು ಚಿತ್ರತಂಡ ಬಾಯಿಬಿಟ್ಟಿಲ್ಲ. ಕಾರಣ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನಾವರಣ ಮತ್ತು ಸ್ಕ್ರಿಪ್ಟ್​ ಪೂಜೆ ಮುಗಿದಿದೆ. ಇನ್ನೂ ಚಿತ್ರ ಶುರುವಾಗುವುದಕ್ಕೆ ಮತ್ತು ಮುಗಿಯುವುದಕ್ಕೆ ಸಾಕಷ್ಟು ಸಮಯ ಇರುವುದರಿಂದ, ಹಂತಹಂತವಾಗಿ ಚಿತ್ರದ ಬಗ್ಗೆ ವಿವರಗಳನ್ನು ನೀಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ‘ಕೆಎ 15’ ಎಂಬುದು ಸಾಗರದ ಆರ್​ಟಓ ರಿಜಿಸ್ಟ್ರೇಶನ್​ ಆಗಿದ್ದು, ಸಾಗರದ ಸುತ್ತಮುತ್ತ ನಡೆಯುವ ಕಥೆ ಇದಾಗಿರಬಹುದು ಎಂದು ಊಹಿಸಲಾಗಿದೆ. ಇನ್ನು, ಈ ಶೀರ್ಷಿಕೆ ಅಪೂರ್ಣ ಎಂದು ಹೇಳಲಾಗುತ್ತಿದ್ದು, ಪೂರ್ತಿ ಶೀರ್ಷಿಕೆಯನ್ನು ಇನ್ನೊಮ್ಮೆ ಬಿಡುಗಡೆ ಮಾಡಲಾಗುತ್ತದಂತೆ. ಬಹುಶಃ ಕೆಎ ಎಂಬುದು ಚಿತ್ರದ ಇಬ್ಬರು ನಾಯಕರ ಹೆಸರುಗಳಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಜಸ್ಟ್​ ಪಾಸ್​’ ಆದವರಿಗೇ ಒಂದು ಪ್ರತ್ಯೇಕ ಕಾಲೇಜ್​ …

    ‘ಕೆಎ 15’ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೇಶ್​ ಮತ್ತು ಕಾರ್ತಿಕ್​ ಚಿನ್ನೋಜಿ ರಾವ್ ಅವರ ಸಂಗೀತವಿದೆ.

    ಅಮಿತಾಭ್​ ಬಚ್ಚನ್​ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ … ದೀದಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts