ಕೆ.ಆರ್.ಸಾಗರ: ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕ್ರ್ ಜಯಂತಿ ಆಚರಿಸಲಾಯಿತು.
ಅಂಬೇಡ್ಕ್ರ್ರ ಭಾವಚಿತ್ರವನ್ನು ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಿ ಮಾತನಾಡಿದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಅಂಬೇಡ್ಕರ್ರ ತತ್ವ-ಸಿದ್ಧಾಂತ ಜಾತ್ಯತೀತವಾದದ್ದು. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂದರು.
ಲೆಕ್ಕ ಅಧಿಕ್ಷಕ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಖಚಾಂಚಿ ನಾಗೇಶ್, ಸಿಬ್ಬಂದಿ ರಿಜ್ವಾನ್, ಜಯಪ್ರಕಾಶ್, ಅರವಿಂದ, ಕೆಂಪ, ಚಂದ್ರು, ಬಸವರಾಜು ಇತರರಿದ್ದರು.
ಇನ್ನು ಇಲ್ಲಿನ ಗ್ರಾ.ಪಂ ಕಚೇರಿ, ಶಾಲಾ ಕಾಲೇಜು, ಪೋಲಿಸ್ ಠಾಣೆ ಸೇರಿದಂತೆ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.