ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದಲ್ಲಿ “ವೀರ್ ಭಾರತ್-ಗುರಿಯತ್ತ ನಡೆ”ಗೆ ಚಾಲನೆ ದೊರೆತಿದೆ.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವಬ್ರಿಗೇಡ್ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಗ್ರಾಮದ 40ಕ್ಕೂ ಹೆಚ್ಚು ಯುವಕರು ನಡಿಗೆ ಆರಂಭಿಸಿದ್ದಾರೆ.
ಅಮಚವಾಡಿಯ ಬೀದಿಗಳಲ್ಲಿ ಸಂಚಾರ ನಡೆಸುತ್ತಿರುವ ಯುವ ಬ್ರಿಗೇಡ್ ಸದಸ್ಯರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಪ್ರಚಾರ ಮಾಡಿದರು. ಸುರೇಶ್ ಋಗ್ವೇದಿ, ಚಂದ್ರು, ಮೋಹನ್ ರಾಜು, ಮಂಜು, ಮಹೇಶ್, ಶೇಖರ್ ಇತರರಿದ್ದರು.