ಅಂಕೋಲಾ: ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ತಾಲೂಕಿನ ಬೇಲೆಕೇರಿಯ ಮೂಲ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ರಾಜೇಶ ಹಮ್ಮಣ್ಣ ನಾಯಕ ಅವರು ಮೂಲತಃ ಅಂಕೋಲಾದ ಬೇಲೆಕೇರಿಯವರಾಗಿದ್ದು, ಪ್ರಸ್ತುತ ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಮೇಲೆ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಕುಂದಾಪುರದ ಸಲೀಂ ಅಲಿ ರಸ್ತೆಗೆ ಹೊಂದಕೊಂಡ ಅವರ ಸ್ವಂತ ಮನೆ ಮತ್ತು ತಾಲೂಕಿನ ಬೇಲೆಕೇರಿಯ ಮೂಲ ಮನೆ ಯಲ್ಲಿ ಸೋಮವಾರ ಬೆಳಗ್ಗೆ ವೇಳೆಯಲ್ಲಿ ಮಂಗಳೂರು ಲೋಕಾಯುಕ್ತ ನಿರೀಕ್ಷಕ ಸುರೇಶಕುಮಾರ ಬಿ. ನೇತೃ ತ್ವದಲ್ಲಿ ದಾಳಿ ನಡೆಸಿದರು.
ರಾಜೇಶ ನಾಯಕ ಅವರ ತಂದೆ-ತಾಯಿ ಮಾತ್ರ ಮನೆಯಲ್ಲಿದ್ದು, ಅವರಿಂದ ಮಾಹಿತಿ ಜತೆ ದಾಖಲಾತೆ ಪತ್ರಗಳನ್ನು ಪರಿಶೀಲಿಸಿ, ಮತ್ತು ಮನೆ ತೆರಿಗೆ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ ತಂಡದವರು ಹಾಜರಿದ್ದರು.
ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್; ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ 90 ಕಡೆ ದಾಳಿ