More

    ಆಕಳಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು

    ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಸು. ರಾಮಣ್ಣ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಕಾಯ್ದೆ ಜಾರಿಗೊಳ್ಳಬೇಕಿತ್ತು. ಈಗಲಾದರೂ ಸರ್ಕಾರ ಕಾಯ್ದೆ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಕುಂದಗೋಳಮಠ, ರವಿ ನಾಯ್ಕ, ಬಸವರಾಜ ಅಮ್ಮಿನಬಾವಿ, ಕೃಷ್ಣ ಗಂಡಗಾಳೆಕರ, ಸುಭಾಸ ಅಂಕಲಕೋಟಿ, ಸದಾಶಿವ ಚೌಶೆಟ್ಟಿ, ವಿಜಯಾ ಗುಡಗೇರಿ, ಮೇಘಾ ರೇವಣಕರ, ಭಾರತಿ ಕಾಂಬ್ಳೆ ಇತರರಿದ್ದರು.

    ಗೋಪನಕೊಪ್ಪದಲ್ಲಿ…: ಗೋಪನಕೊಪ್ಪದ ಸದ್ಗುರು ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಗೋಪೂಜೆ ನೆರವೇರಿಸಲಾಯಿತು. ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಈಶ್ವರ ಗೌಡ ಪಾಟೀಲ, ರಾಮಚಂದ್ರ ಹದಗಲ್ಲ, ಬೀರಪ್ಪ ಖಂಡೇಕಾರ, ಮೇನಕಾ ಹುರಳಿ, ಮಲ್ಲಿಕಾರ್ಜುನ ಗುಂಡೂರ, ಮಹೇಂದ್ರ ಕೌತಾಳ, ರಾಜು ಕಾಳೆ, ಅಶೋಕ ವಾಲ್ಮೀಕಿ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ, ಉಮಾ ಮುಕುಂದ, ಜಯಶ್ರೀ ನಿಂಬರಗಿ, ಭಾರತಿ ಟಪಾಲ, ವಸಂತನಾಡ ಜೋಶಿ, ಕೃಷ್ಣ ಗಂಡಗಾಳೇಕರ, ಗೋಪಾಲ ಬದ್ದಿ, ವಿರೂಪಾಕ್ಷ ರಾಯನಗೌಡರು, ಅವಿನಾಶ ಹರಿವಾಣ, ಚಂದ್ರು ನೂಲ್ವಿ, ಸುಭಾಷ ಅಂಕಲಕೋಟಿ, ರಾಧಾ ದೇಸಾಯಿ, ಪ್ರಭಾ ಹಿರೇಮಠ, ಸೋನಿ ಗುಡ್ಡದ, ಬಸವರಾಜ ಬೆಳಗಲಿ, ದೇವಿಕಾ ಚಲವಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts