ನವದೆಹಲಿ: ಪುಣೆಯಿಂದ ದೆಹಲಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನದ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಲ್ಯಾಂಡಿಂಗ್ ಮಾಡಲಾಡಗಿದೆ.
ಮಂಗಳವಾರ ಸಂಜೆ 5.44ಕ್ಕೆ ವಿಮಾನ ಪುಣೆಯಿಂದ ಆಗಮಿಸಿತ್ತು. ಅದರಲ್ಲಿ 180 ಪ್ರಯಾಣಿಕರಿದ್ದರು. ‘ಪುಣೆ-ದೆಹಲಿ ನಡುವೆ ಕಾರ್ಯಾಚರಿಸುಸುತ್ತಿರುವ ಏರ್ ಇಂಡಿಯಾ ವಿಮಾನ AI-858ರ ವಿಂಡ್ಶೀಲ್ಡ್ನ ಬಲಭಾಗದಲ್ಲಿ (ಸ್ಟಾರ್ಬೋರ್ಡ್ ಬದಿಯಲ್ಲಿ) ಸಣ್ಣ ಬಿರುಕು ಕಾಣಿಸಿಕೊಂಡ ನಂತರ, ನಿಗದಿತ ಆಗಮನದ ಸಮಯಕ್ಕಿಂತ ಮುಂಚಿತವಾಗಿ ಸುರಕ್ಷಿತವಾಗಿ ದೆಹಲಿಗೆ ಬಂದಿಳಿಯಿತು’ಎಂದು ಏರ್ಲೈನ್ಸ್ ತಿಳಿಸಿದೆ.
ಇದನ್ನೂ ಓದಿ: ಕಾಫಿ ಬೀಜಗಳಲ್ಲಿ ಅಡಗಿರುವ ವ್ಯಕ್ತಿಯ ಮುಖವನ್ನು 8 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ..?
ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದ ವಿಂಡ್ಶೀಲ್ಡ್ ಅನ್ನು ಬದಲಾಯಿಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.