More

    ದೇವರು, ಧರ್ಮದ ಮೇಲಿನ ನಂಬಿಕೆ ಹಸಿರಾಗಿರಲಿ

    ಐಮಂಗಲ: ದೇವರು ಮತ್ತು ಧರ್ಮದ ಮೇಲಿನ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬಾರದು ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

    ಹೋಬಳಿಯ ಸೊಂಡೆಕೆರೆ ಗ್ರಾಮದಲ್ಲಿ ಬುಧವಾರ ಶ್ರೀ ಕೆಂಚಾಂಬ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಅಧ್ಯಾತ್ಮದಲ್ಲಿನ ನಂಬಿಕೆ ಮನಸ್ಸಿಗೆ ನೆಮ್ಮದಿ ಕೊಡುವ ಜತೆಗೆ ಪರಿವರ್ತನೆಗೂ ಕಾರಣವಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು. ಗ್ರಾಮದಲ್ಲಿ ಶುದ್ಧ ಕುಡಿವ ನೀರು, ಆಸ್ಪತ್ರೆ, ಪಶು ಚಿಕಿತ್ಸಾಲಯ ಇತರ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದರು.

    ನರಹರಿ ಸದ್ಗುರುಗಳ ಶಿಷ್ಯರಾದ ಲಿಂಗಪ್ಪ ಸ್ವಾಮಿ ಮಾತನಾಡಿ, ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ಅಖಂಡ ಭಜನೆ, ಭೂಮಿ ಪೂಜೆ ನೆರವೇರಿಸುವ ಸಂಪ್ರದಾಯ ಹಿಂದಿನಿಂದಲೇ ನಡೆದು ಬಂದಿದೆ. ಹೀಗೆ ಮಾಡುವುದರಿಂದ ಗುರು ಬಲ ಹೆಚ್ಚುತ್ತದೆ ಎಂದರು.

    ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಅನ್ನಪೂರ್ಣಮ್ಮ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಜಿಪಂ ಸದಸ್ಯರಾದ ಶಶಿಕಲಾ, ಟಿ.ಆರ್.ರಾಜೇಶ್ವರಿ, ರವಿಕುಮಾರ್, ಎಸ್.ತಿಪ್ಪೇಸ್ವಾಮಿ, ಟಿ.ಲಿಂಗಪ್ಪ, ಟಿ.ತಿಪ್ಪೇಸ್ವಾಮಿ, ಕೆ.ಗಿರಿಯಪ್ಪ, ಕಂದಿಕೆರೆ ಸುರೇಶ್‌ಬಾಬು, ಎಸ್.ಎಂ.ಕೃಷ್ಣರೆಡ್ಡಿ, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts