ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮತ್ತು ರೋಹನ್ಪ್ರೀತ್ ಸಿಂಗ್ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಭೇಟಿಯಾದ ನೇಹಾ ಮತ್ತು ರೋಹನ್ಪ್ರೀತ್, ಇದೇ ಅಕ್ಟೋಬರ್ 26ಕ್ಕೆ ಮದುವೆಯಾಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದು ಹಲವರ ಪ್ರಶ್ನೆ. ಇದೀಗ ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಮಗ ಆದಿತ್ಯ ನಾರಾಯಣ್ ಸಹ ಅದೇ ಪ್ರಶ್ನೆಯನ್ನು ಎತ್ತಿದ್ದಾರೆ.
ಇದನ್ನೂ ಓದಿ: ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಗಿಫ್ಟ್!
ಆದಿತ್ಯ ನಾರಾಯಣ್ ಮತ್ತು ನೇಹಾ ಕಕ್ಕರ್ ಒಂದು ಕಾಲಕ್ಕೆ ಬಾಲಿವುಡ್ನಲ್ಲಿ ಪ್ರಣಯಪಕ್ಷಿಗಳಾಗಿ ಗುರುತಿಸಿಕೊಂಡಿದ್ದರು. ಆದರೆ, ಕಾಲಕ್ರಮೇಣ ಅವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ ದೂರವಾದರು. ಆದಿತ್ಯ ಜೀವನದಿಂದ ದೂರವಾದ ನೇಹಾ, ರೋಹನ್ಪ್ರೀತ್ ಸಿಂಗ್ ಅವರನ್ನು ಭೇಟಿಯಾದರು. ಭೇಟಿಯಾದ ಕೆಲವೇ ದಿನಗಳಲ್ಲಿ ಅವರಿಬ್ಬರ ಮದುವೆಯ ಘೋಷಣೆಯಾಗಿದೆ.
ಇದು ಹೇಗೆ ಸಾಧ್ಯ ಎನ್ನುವುದರ ಜತೆಗೆ, ಆದಿತ್ಯ ಅವರನ್ನು ಉರಿಸುವುದಕ್ಕೆಂದೇ ನೇಹಾ ಈ ರೀತಿ ಆತುರಾತುರವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವಾಗಿ ಮಾತನಾಡಿರುವ ಆದಿತ್ಯ, ತಮ್ಮ ಮಾಜಿ ಗೆಳತಿಯ ಮದುವೆಗೆ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ, ಅವರು ಸಹ ಇಷ್ಟು ಆತುರ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ಭೇಟಿ ನೀಡಿದ ತುಂಬು ಗರ್ಭಿಣಿ ಮೇಘನಾ: ಸಿಹಿ ಸುದ್ದಿ ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ!
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನೇಹಾ ನಿಜಕ್ಕೂ ಮದುವೆಯಾಗುತ್ತಿದ್ದಾರಾ? ನನಗಂತೂ ಆಹ್ವಾನಪತ್ರ ಸಿಕ್ಕಿಲ್ಲ. ಕೆಲವು ವಾರಗಳ ಹಿಂದಷ್ಟೇ ರೋಹನ್ಪ್ರೀತ್ ಅವರನ್ನು ನೇಹಾ ಭೇಟಿಯಾದರಂತೆ. ಭೇಟಿಯಾದ ಒಂದೇ ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆ ಎಂದರೆ ಅದು ಹೇಗೆ ಸಾಧ್ಯ? ಈ ಕುರಿತು ನೇಹಾ ಆಗಲೀ, ರೋಹನ್ಪ್ರೀತ್ ಆಗಲೀ ಎಲ್ಲೂ ಮಾತನಾಡಿಲ್ಲ. ಹಾಗಾಗಿ ಮದುವೆ ನಡೆಯುತ್ತಿದೆಯಾ, ಇಲ್ಲವಾ ಎಂಬುದೇ ನನಗೆ ಗೊತ್ತಿಲ್ಲ. ಹಾಗಾಗಿ ಈಗಲಾದರೂ ಅವರಿಬ್ಬರೂ ಮದುವೆ ಬಗ್ಗೆ ಮಾತನಾಡಲಿ’ ಎಂದು ಹೇಳಿದ್ದಾರೆ.
ಸಚಿವರ ಮನೆಯಲ್ಲಿ ಪವರ್ ಸ್ಟಾರ್; ಪುನೀತ್ ರಾಜ್ಕುಮಾರ್ ಕೈಯಲ್ಲಿ ಬೆಳ್ಳಿಗದೆ…