More

    ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್​, ಇದುವರೆಗೂ 35ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿ, ಅವರಿಂದ ಹೇಳಿಕೆಗಳನ್ನು ಪಡೆದಿದೆ. ಈ ಮಧ್ಯೆ, ಆದಿತ್ಯ ಚೋಪ್ರಾ ಸಹ ಮುಂಬೈ ಪೊಲೀಸ್​ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

    ಹೌದು, ಶನಿವಾರ ಬೆಳಿಗ್ಗೆ ಮುಂಬೈನ ವರ್ಸೋವಾ ಪೊಲೀಸ್​ ಸ್ಟೇಶನ್​ಗೆ ಹಾಜರಾದ ಆದಿತ್ಯ ಚೋಪ್ರಾ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ, ಸುಶಾಂತ್​ ಕುರಿತಾಗಿ ಆದಿತ್ಯ ಏನೆಲ್ಲಾ ಹೇಳಿದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡಲಾಗಿದೆ.

    ಇದನ್ನೂ ಓದಿ: ನೀವ್ಯಾಕೆ ‘ಪವಿತ್ರ ರಿಶ್ತಾ 2’ ಮಾಡಬಾರದು? ಏಕ್ತಾಗೆ ಅಂಕಿತಾ ಪ್ರಶ್ನೆ …

    ಯಶ್​​ರಾಜ್​ ಫಿಲಂಸ್ ಬ್ಯಾನರ್​ನಡಿ ಸುಶಾಂತ್​, ‘ಡಿಟೆಕ್ಟಿವ್​ ಬ್ಯೋಮಕೇಶ ಭಕ್ಷಿ’ ಮತ್ತು ‘ಶುದ್ಧ್​ ದೇಶಿ ರೊಮ್ಯಾನ್ಸ್​’ ಚಿತ್ರಗಳಲ್ಲಿ ನಟಿಸಿದ್ದರು. ಶೇಖರ್​ ಕಪೂರ್​ ನಿರ್ದೇಶನದ ‘ಪಾನಿ’ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲಿಲ್ಲ.

    ಹಾಗೆ ‘ಪಾನಿ’ ಚಿತ್ರ ನಿಲ್ಲುವುದಕ್ಕೆ ಕಾರಣ ಆದಿತ್ಯ ಅಲ್ಲ, ಸಲ್ಮಾನ್​ ಖಾನ್​ ಎಂದು ಹೇಳಲಾಗುತ್ತದೆ. ಆದಿತ್ಯಗೆ ಆ ಚಿತ್ರವನ್ನು ಮುಂದುವರೆಸಬೇಕು ಎಂಬ ಆಸೆ ಇತ್ತಂತೆ. ಆದರೆ, ಸುಶಾಂತ್​ ಬಗ್ಗೆ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದ ಸಲ್ಮಾನ್​ ಖಾನ್​ ತಮ್ಮ ಬಲ ಉಪಯೋಗಿಸಿ, ‘ಪಾನಿ’ ಚಿತ್ರವು ಶುರುವಾಗದಂತೆ ತಡೆದರು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕರೊನಾದಿಂದ ಆಸ್ಪತ್ರೆ ಪಾಲಾಗಿದ್ದ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆರೋಗ್ಯ ಈಗ ಹೇಗಿದೆ?

    ‘ಪಾನಿ’ ಚಿತ್ರವನ್ನು ನಿಲ್ಲಸಬೇಕು ಎಂದು ಸಲ್ಮಾನ್​ ಬೆದರಿಕೆ ಹಾಕಿದಾಗ, ಆದಿತ್ಯ ಚೋಪ್ರಾ ಮೊದಲು ಒಪ್ಪಲಿಲ್ಲವಂತೆ. ಯಾವಾಗ ಅವರು ಬಗ್ಗಲಿಲ್ಲವೋ, ಆಗ ಸಲ್ಮಾನ್​ ನೇರವಾಗಿ ‘ಸುಲ್ತಾನ್​’ ಮತ್ತು ‘ಟೈಗರ್​ ಜಿಂದಾ ಹೇ’ ಚಿತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದರಂತೆ.

    ಅದಾಗಲೇ, ಆ ಎರಡೂ ಚಿತ್ರಗಳ ಮೇಲೆ ಸಾಕಷ್ಟು ಹಣ ಹೂಡಿದ್ದ ಆದಿತ್ಯ, ಬೇರೆ ದಾರಿ ಇಲ್ಲದೆ ‘ಪಾನಿ’ ಚಿತ್ರವನ್ನು ನಿಲ್ಲಿಸಿದ್ದಾರೆ ಎಂದು ಬಾಲಿವುಡ್​ನಲ್ಲಿ ಹೇಳಲಾಗುತ್ತದೆ. ಅದೇ ಕಾರಣಕ್ಕೆ, ಆದಿತ್ಯ ಅವರನ್ನು ಮುಂಬೈ ಪೊಲೀಸ್​ ವಿಚಾರಣೆಗೆ ಒಳಪಡಿಸಿದ್ದಾರೆ.
    ಆದಿತ್ಯ ಚೋಪ್ರಾ ಅಲ್ಲದೆ, ಸುಶಾಂತ್​ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮನಶ್ಯಾಸ್ತ್ರಜ್ಱ ಡಾ. ಕೇರ್ಸಿ ಚಾವ್ಡಾ ಅವರನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸುಶಾಂತ್​ ಅವರ ಮಾನಸಿಕ ಸ್ಥಿತಿ ಹೇಗಿತ್ತು, ಅವರು ಏನೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ ಯಾವೆಲ್ಲಾ ಮಾತ್ರೆಗಳನ್ನು ನೀಡಲಾಗಿತ್ತು ಎಂಬ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

    PHOTOS: ಗ್ಲಾಮರಸ್ ಅವತಾರದಲ್ಲಿ ‘ರಾಬರ್ಟ್’​ ನಾಯಕಿ ಆಶಾ ಭಟ್ ಫೋಟೋ ಝಲಕ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts