ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಶಂಕಿತ ಉಗ್ರ ಶಾರೀಕ್, ಮೈಸೂರಲ್ಲಿ ಹಿಂದು ಯುವಕನೆಂದು ಹೇಳಿಕೊಂಡು ನಕಲಿ ಆಧಾರ್ ಇಟ್ಟುಕೊಂಡು ಓಡಾಡುತ್ತಿದ್ದ. ಅಷ್ಟೇ ಅಲ್ಲ, ಟೆಕ್ಕಿಯೊಬ್ಬರ ಹೆಸರಲ್ಲಿ ಸಿಮ್ ಕೂಡ ಪಡೆದಿದ್ದ. ಫೋನ್ ತರಬೇತಿಗೂ ನಕಲಿ ದಾಖಲೆ ಕೊಟ್ಟಿದ್ದ… ಇಂತಹ ಆಘಾತಕಾರಿ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಟ್ವಿಟ್ ಮೂಲಕ ಸಾರ್ವಜನಿಕರಿಗೆ ಅಲೋಕ್ ಕುಮಾರ್ ಅವರು ನೀಡಿರುವ ಸಲಹೆ ಇಲ್ಲಿದೆ…
– ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ
– ಯುಐಡಿಎಐ ಸೈಟ್ನ ದುರುಪಯೋಗ ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್ಲಾಕ್ ಸೌಲಭ್ಯವನ್ನು ಬಳಸಿ
– ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಅವರ ಪೂರ್ವಾಪರಗಳನ್ನು ಪರಿಶೀಲಿಸಿ. ಗುರತಿನ ಚೀಟಿಗಳ ಒಂದು ಪ್ರತಿ ಪಡೆದಿಟ್ಟುಕೊಳ್ಳಿ.
– ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಿ
Learnings from Mangalore blast case-
– Plz be careful if you lose your Aadhaar card
Use Lock & Unlock facility available on UIDAI site to prevent its misuse
– Plz verify antecedents of tenants before renting it out
– Effective neighbourhood watch system to be in place pic.twitter.com/xcy5ehtykU
— alok kumar (@alokkumar6994) November 22, 2022
ಶಂಕಿತ ಉಗ್ರನ ಟಾರ್ಗೆಟ್ನಿಂದ ಸಿಎಂ ಜಸ್ಟ್ ಮಿಸ್! ಶಾರೀಕ್ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!
ಸ್ವತಂತ್ರವಾಗಿ JDS ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ, ದಲಿತರು-ಮಹಿಳೆಗೆ ಡಿಸಿಎಂ ಪಟ್ಟ: HDK ಘೋಷಣೆ
ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ