More

    ಅದೃಷ್ಟ ಕೈಕೊಟ್ಟಿತ್ತು!; ಅಬ್ಬರಿಸಲು ರೆಡಿಯಾದ ಲೇಖಚಂದ್ರ!

    ಬೆಂಗಳೂರು: ‘ವಜ್ರಕಾಯ’, ‘ಕೃಷ್ಣ ರುಕ್ಕು’, ‘ಕಿರೀಟ’, ‘ಸಂಜೀವ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಲೇಖಚಂದ್ರ, ಭರವಸೆ ಮೂಡಿಸಿದ್ದ ನಟಿ. ಕನ್ನಡಕ್ಕೆ ಒಬ್ಬ ಉತ್ತಮ ಕನ್ನಡದ ನಟಿ ಸಿಕ್ಕಾಯ್ತು ಎನ್ನುತ್ತಿರುವಾಗಲೇ ಕಣ್ಮರೆಯಾಗಿಬಿಟ್ಟಿದ್ದರು. ಈಗ ಕರೋನಾ ಬ್ರೇಕ್ ಬಳಿಕ ಲೇಖಚಂದ್ರ ವಾಪಸ್ಸಾಗಿದ್ದಾರೆ. ರಾಮ್ಾರಾಯಣ್ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಾಯಕನಾಗಿರುವ ‘ಅಬ್ಬರ’ ಚಿತ್ರದ ಬಗ್ಗೆ ಹೇಳಿಕೊಳ್ಳುವ ಲೇಖಾ, ‘ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿದ್ದೇನೆ. ನಾನೂ ಬಾಲ್ಯದಲ್ಲಿ ಡಾಕ್ಟರ್ ಆಗಬೇಕು ಅಂತಿದ್ದೆ, ಆದರೆ, ಓದಿದ್ದು ಮಾತ್ರ ಕಾಮರ್ಸ್. ಈಗ ರೀಲ್​ನಲ್ಲಿ ವೈದ್ಯೆಯಾಗುವ ಮೂಲಕ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದೇನೆ. ರವಿಶಂಕರ್ ಸರ್​ನ ಕೂರಿಸಿ, ಅವರ ಡೈಲಾಗ್ ಅವರಿಗೇ ಹೊಡೆಯುವ ಒಂದು ಸೀನ್ ಇತ್ತು. ಅದು ಚಾಲೆಂಜಿಂಗ್ ಅನ್ನಿಸಿತು’ ಎಂದು ಮಾಹಿತಿ ನೀಡುತ್ತಾರೆ. ಜತೆಗೆ ವಿನೋದ್ ಪ್ರಭಾಕರ್​ಗೆ ನಾಯಕಿಯಾಗಿ ‘ಫೈಟರ್’ ಚಿತ್ರದಲ್ಲಿ ಪಟಪಟ ಮಾತನಾಡುವ ಪೇಂಟರ್ ಪಾತ್ರದಲ್ಲಿ ಹಾಗೂ ‘ವೀರಪುತ್ರ’ ಚಿತ್ರದಲ್ಲಿ ವಿಜಯಸೂರ್ಯಗೆ ನಾಯಕಿಯಾಗಿ ಕೊಳಗೇರಿಯಲ್ಲಿ ವಾಸಿಸುವ ಹುಡುಗಿಯ ಸವಾಲಿನ ಪಾತ್ರದಲ್ಲಿ ನಟಿಸಿದ್ದಾರೆ.

    ಇನ್ನು ‘ಕೆಜಿಎಫ್’ ಚಿತ್ರಗಳ ಯಶಸ್ಸನ್ನು ಕೊಂಡಾಡುವ ಲೇಖಾ, ‘ಅವರ ಜಾಗದಲ್ಲಿ ನಾವಿಲ್ಲ ಅಂತ ಅಥವಾ ಆ ಚಿತ್ರದಲ್ಲಿ ನಾನು ನಟಿಸಿಲ್ಲ ಅಂತ ನನಗೆ ಅನ್ನಿಸಿಯೇ ಇಲ್ಲ. ಕನ್ನಡ ಚಿತ್ರ ಎಲ್ಲಿಗೋ ಹೋಗ್ತಿದೆ ಎಂಬ ಹೆಮ್ಮೆಯಿದೆ. ಕನ್ನಡ ಚಿತ್ರವನ್ನು ಕಡೆಗಣನೆ ಮಾಡುತ್ತಿದ್ದವರೂ ‘ಕೆಜಿಎಫ್’ ಬಗ್ಗೆ, ಯಶ್ ಮತ್ತು ಸುದೀಪ್ ಅವರ ಬಗ್ಗೆ ಮಾತನಾಡುತ್ತಾರೆ’ ಎಂದು ಖುಷಿಯಾಗುತ್ತಾರೆ. ಅದಿರಲಿ, ನೀವೇಕೆ ಕಣ್ಮರೆಯಾಗಿದ್ದಿರಿ? ಎಂದು ಕೇಳಿದರೆ, ‘ಎಷ್ಟೋ ಚಿತ್ರಗಳು ಅರ್ಧಕ್ಕೆ ನಿಂತವು, ಪೂರ್ಣಗೊಂಡ ಚಿತ್ರಗಳು ರಿಲೀಸ್ ಆಗಲೇ ಇಲ್ಲ. ತೆರೆಗೆ ಬಂದ ಚಿತ್ರಗಳು ಯಶಸ್ವಿಯಾಗಲಿಲ್ಲ. ಅದೃಷ್ಟ ಕೈಕೊಟ್ಟಿತ್ತು ಅಂತನ್ನಿಸುತ್ತೆ. ಆದರೆ, ಈಗಲೂ ಯಶಸ್ಸು ಸಿಗುತ್ತದೆ ಎಂಬ ಭರವಸೆಯಿದೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಹಾಗಂತ ಚಿತ್ರತಂಡಗಳನ್ನು ನಾನು ದೂರುತ್ತಿಲ್ಲ. ಎಲ್ಲೋ ನನ್ನಲ್ಲೇ ಪ್ರತಿಭೆ ಕಡಿಮೆ ಇದ್ಯಾ? ನೂರಕ್ಕೆ ನೂರು ಪ್ರತಿಭೆ ಇಲ್ವಾ? ಆ ನಿಟ್ಟಿನಲ್ಲಿ ನಾನು ಇನ್ನೂ ಕಲಿಯುತ್ತಿದ್ದೇನೆ’ ಎಂದು ಮುಕ್ತವಾಗಿ ಮಾತನಾಡುತ್ತಾರೆ ಲೇಖಚಂದ್ರ.

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts