More

    ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ಹೈದರಾಬಾದ್​: ದಕ್ಷಿಣ ಭಾರತ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ 1989ರ ಡಿಸೆಂಬರ್‌ 21ರಂದು ಮುಂಬೈನ ಸಿಂಧಿ ಕುಟುಂಬದಲ್ಲಿ ಜನಿಸಿದರು.

    ಇದನ್ನೂ ಓದಿ:ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ, ಬಿಜೆಪಿ ಸೇರಿದ ಹಿರಿಯ ನಾಯಕಿ

    ನಟಿ ತಮನ್ನಾ ಕನ್ನಡದಲ್ಲಿ ಜಾಗ್ವರ್‌ ಮತ್ತು ಕೆಜಿಎಫ್‌ ಚಿತ್ರಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಹದಿಮೂರನೇ ವಯಸ್ಸಿಗೆ ನಟನಾ ಕ್ಷೇತ್ರಕ್ಕೆ ಆಗಮಿಸಿದ ಈ ಹಾಲುಗಲ್ಲದ ಚೆಲುವೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ಕರೊನಾ ನಂತರ ಈ ನಟಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದು, ವಿಶೇಷ ಹಾಡುಗಳಲ್ಲಿ ನಟಿಸುತ್ತಿದ್ದಾರೆ. ಅದೇ ಸಮಯದಲ್ಲಿ, ದೇಶದಲ್ಲಿ OTT ಗಳು ಹೆಚ್ಚಾಗುತ್ತಿದ್ದಂತೆ, ಈ ಸುಂದರಿ ತನ್ನ ಗಮನವನ್ನು ಆ ಕಡೆಗೆ ತಿರುಗಿಸಿ, ತನ್ನ ಗ್ಲಾಮರ್​ ಡೋಸ್ ಹೆಚ್ಚಿಸಿ ಮತ್ತೊಮ್ಮೆ ಸರಣಿ ಆಫರ್‌ಗಳೊಂದಿಗೆ ಬ್ಯುಸಿಯಾಗಿದ್ದಾಳೆ. ಬೋಲ್ಡ್ ಸೀನ್, ಡಾರ್ಕ್ ಸೀನ್ ಗಳಲ್ಲಿ ನಟಿಸಿ ಈಗಿನ ನಟಿಯರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

    ಬಾಹುಬಲಿ ಚಿತ್ರದ ಮೂಲಕ ತಮನ್ನಾ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಅದಕ್ಕೂ ಮೊದಲು ಕೊಂಚಂ ಇಷ್ಟಂ ಕೊಂಚಂ ಕಷ್ಟಂ, ಪೈಯ್ಯ, ಬದ್ರಿನಾಥ್‌ ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. 2015ರಲ್ಲಿ ಬಿಡುಗಡೆಯಾದ ಈ ಪ್ಯಾನ್‌ ಇಂಡಿಯಾ ಸಿನಿಮಾ ತಮನ್ನಾ ಭಾಟಿಯಾ ಕರಿಯರ್‌ನಲ್ಲಿ ಪ್ರಮುಖ ಮೈಲಿಗಲ್ಲು. ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ, ಪ್ರಭಾಸ್‌, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ನಟಿಸಿದ್ದಾರೆ.

    ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಬಾಹುಬಲಿ ಖ್ಯಾತಿ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ.
    ತಮನ್ನಾ ಭಾಟಿಯಾ, ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ಎಸ್‌ಎಸ್ ರಾಜಮೌಳಿ ನನ್ನನ್ನು ಆಯ್ಕೆ ಮಾಡಿದ ಕಾರಣದ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳಿದ್ದಾರೆ. ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ಆಕಸ್ಮಿಕವಾಗಿ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದೇನೆ ಎಂದರು.

    ರಾಜಮೌಳಿ ಅವರನ್ನು ನನಗೆ ಯಾಕೆ ಈ ಪಾತ್ರ ಕೊಟ್ಟಿದ್ದೀರಿ ಎಂದು ನಾನು ಸಾಕಷ್ಟು ಬಾರಿ ಕೇಳಿದ್ದೇನೆ, ಆದರೆ ಅವರು ನನಗೆ ಉತ್ತರವನ್ನು ನೀಡಿಲ್ಲ ಮತ್ತು ಅವರು ನೋಡಿದಾಗಲೆಲ್ಲಾ ಮುಗುಳ್ನಕ್ಕು ಹೋಗಿದ್ದಾರೆ ಎಂದು ಹೇಳಿದರು.

    ಆದರೆ ನಾನು ಆವಂತಿಕಾ ಪಾತ್ರ ಮಾಡುವಾಗ ರಾಜಮೌಳಿ ಅವರು ನನ್ನ ಪ್ರತಿಭೆಯನ್ನು ನೋಡಿ ನನಗೆ ಈ ಪಾತ್ರವನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಯಾರು ಯಾವ ಪಾತ್ರವನ್ನು ಮಾಡಬಲ್ಲರು ಎಂಬುದನ್ನು ಕಂಡುಹಿಡಿದು ನನಗೆ ಇಷ್ಟು ಒಳ್ಳೆಯ ಪಾತ್ರವನ್ನು ನೀಡಿ ದೇಶಾದ್ಯಂತ ಗುರುತಿಸುವಂತೆ ಮಾಡಿದ್ದಕ್ಕಾಗಿ ಎಸ್.ಎಸ್ ರಾಜಮೌಳಿ ಅವರಿಗೆ ಧನ್ಯವಾದಗಳು ಅರ್ಪಿಸಿದರು. ಇದೀಗ ಈ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಮನ್ನಾ ಪ್ರಸ್ತುತ ತಮಿಳಿನಲ್ಲಿ ಅರಣ್ಮೈ 4, ಹಿಂದಿಯಲ್ಲಿ ಶ್ರೀ 2 ಮತ್ತು ಇನ್ನೊಂದು ಚಲನಚಿತ್ರ ಮತ್ತು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅದ್ಭುತ ಸರಣಿ ಗೆಲುವು: ವಿರಾಟ್​ ಕೊಹ್ಲಿ ಪೋಸ್ಟ್ ಸಖತ್ ವೈರಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts