ಮುಂಬೈ: ಬಾಲಿವುಡ್ ನಟ ನಲ್ಮಾನ್ಖಾನ್ ಬಾಲ್ಯದ ದಿನದಲ್ಲಿ ನಡೆದ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಸೈಕಲ್ ರಿಪೇರಿ ಮಾಡಿದ ಮೆಕ್ಯಾನಿಕ್ಗೆ ಕೊಡಲು ನನ್ನ ಬಳಿ ಆಗ 1 ರೂಪಾಯಿ 25 ಪೈಸೆ ಇರಲಿಲ್ಲ. ಆ ಮೇಲೆ ಕೊಡುತ್ತೇನೆ ಎಂದು ಹೇಳಿ ಬಂದವನು ಇಲ್ಲಿವರೆಗೂ ಅವರಿಗೆ ಹಣ ಪಾವತಿ ಮಾಡಿಲ್ಲ ಎಂಬ ಬಾಲ್ಯದ ಘಟನೆಯನ್ನು ಅವರು ಹೇಳಿಕೊಂಡಿದ್ದಾರೆ.
ಮುಂಬೈ ಪೊಲೀಸರ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ನಟ ಕಪಿಲ್ ಶರ್ಮಾ ಅವರು ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು.
ನಾನು ಬಾಲ್ಯದಲ್ಲಿ ಇದ್ದೆ. ಆಗ ಚಡ್ಡಿ ಧರಿಸುತ್ತಿದ್ದೆ. ಮುಂಬೈನ ಬೀದಿಗಳಲ್ಲಿ ಸೈಕಲ್ ತುಳಿಯುವುದು ನನಗೆ ತುಂಬಾ ಇಷ್ಟವಾಗಿತ್ತು. ಒಮ್ಮೆ ಟೈರ್ನಲ್ಲಿ ಸಮಸ್ಯೆ ಆಗಿತ್ತು. ಅಲ್ಲೆ ಪಕ್ಕದಲ್ಲೇ ಇದ್ದ ಗ್ಯಾರೇಜ್ಗೆ ತೆರಳಿ ಅದನ್ನು ಸರಿಪಡಿಸುವಂತೆ ಮೆಕ್ಯಾನಿಕ್ ಬಳಿ ಕೋರಿದೆ. ಅವರು ಟೈರ್ ಸರಿಪಡಿಸಿ 1.25 ರೂಪಾಯಿ ಪಾವತಿಸುವಂತೆ ಹೇಳಿದರು. ಜೇಬಿಗೆ ಕೈಹಾಕಿದಾಗ ಹಣ ಇರಲಿಲ್ಲ. ಆಮೇಲೆ ಬಂದು ಕೊಡುತ್ತೇನೆ ಎಂದು ಮೆಕ್ಯಾನಿಕ್ಗೆ ಹೇಳಿ ಬಂದೆ. ನಂತರ ಅದು ಮರೆತು ಹೋಗಿತ್ತು.
ಇತ್ತೀಚೆಗೆ ಆ ವಿಷಯ ತಿಳಿದು ನಾನು ಆ ಮೆಕ್ಯಾನಿಕ್ಗೆ ಹಣ ಹಿಂದಿರುಗಿಸಲು ಮುಂದಾದೆ. ಆದರೆ ಅವರು ಹಣವನ್ನು ನನ್ನಿಂದ ಸ್ವೀಕರಿಸಲಿಲ್ಲ ಎಂದು ನಟ ಸಲ್ಮಾನ್ ಖಾನ್ ಬಾಲ್ಯದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಯೌವ್ವನದ ದಿನಗಳಲ್ಲಿ ಬೈಕ್ ಓಡಿಸುತ್ತಿದ್ದೆ. ಆಗ ಪೆಟ್ರೋಲ್ಗೆ ಹಣ ಇರುತ್ತಿರಲಿಲ್ಲ. ಹೀಗಾಗಿ ಪೆಟ್ರೋಲ್ಗೆ ಸೀಮೆಎಣ್ಣೆ ಬೆರಸಿ ಬೈಕ್ ಚಲಾಯಿಸುತ್ತಿದ್ದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)