ತಿರುವನಂತಪುರಂ: ತನ್ನ ಮೇಲಿರುವ ಲೈಂಗಿಕ ದೌಜರ್ನ್ಯ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಮಲಯಾಳಂ ನಟ ದಿಲೀಪ್ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
2017ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಸಂಚು ಆರೋಪವನ್ನು ದಿಲೀಪ್ ಎದುರಿಸುತ್ತಿದ್ದಾರೆ.
ಮಂಗಳವಾರ ನ್ಯಾಯಮೂರ್ತಿ ಸೈದುರ್ ರೆಹಮಾನ್ ಅವರ ಏಕಸದಸ್ಯ ಪೀಠ ದಿಲೀಪ್ ಅವರ ಮನವಿಯನ್ನು ತಿರಸ್ಕರಿಸಿದ್ದು, ತನಿಖೆ ಮುಂದುವರಿಸಲು ತನಿಖಾಧಿಕಾರಿಗಳಿಗೆ ಸೂಚಿಸಿದೆ.
ದಿಲೀಪ್ ಸೇರಿ ಐದು ಜನರ ವಿರುದ್ಧ ಜನವರಿ 9 ರಂದು ಎಫ್ಐಆರ್ ದಾಖಲಾಗಿತ್ತು. ಪ್ರಸಿದ್ಧ ನಟಿಯೊಬ್ಬರಿಗೆ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯುತ್ನಿಸಲಾಗಿತ್ತು. ನಂತರ ಈ ಪ್ರಕರಣದಲ್ಲಿ ದಿಲೀಪ್ ಕೈವಾಡವಿರುವುದು ಬೆಳಕಿಗೆ ಬಂದಿತ್ತು.