ಮುದಗಲ್: ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೇತ್ರ ಉಚಿತ ಚಿಕಿತ್ಸೆ ಶಿಬಿರ ಅಕಸ್ಮಿಕ ಬೆಂಕಿ ಅವಘಾಡದಿಂದ ರದ್ದು ಮಾಡಲಾಯಿತು.
ಇದನ್ನೂ ಓದಿ: ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸೆ
ನೂರಾರು ಜನರಿಗೆ ನೇತ್ರಾ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಿದ್ದತೆ ಮಾಡಿಕೊಳ್ಳಲು ಮುಂದಾಗಿದ್ದ ವೇಳೆ, ಶಸ್ತ್ರ ಚಿಕಿತ್ಸೆ ಕೊಠಡಿಯ ಎಸಿಯಿಂದ ಬೆಂಕಿ ಕಾಣಿಸಿಕೊಂಡ ದಟ್ಟವಾದ ಹೊಗೆ ಆವರಿಸಿಕೊಂಡಿತು. ಇದರಿಂದ ಕೆಲ ಒತ್ತು ತಬ್ಬಿಬ್ಬಾದ ವೈದ್ಯರು ಚಿಕಿತ್ಸೆ ಕೊಠಡಿಯಿಂದ ಹೊರ ಹೋಡಿ ಬಂದರು.
ಅದೃಷ್ಟಾವಷತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಎಸಿಗೆ ಅಳವಡಿಸಿದ ವಿದ್ಯುತ್ ವೈರ್ ತೆಗೆಯುವಾಗ ಅಭಿ ಎಂಬ ವೈದ್ಯರ ಕೈಗೆ ಸ್ವಲ್ಪ ಬೆಂಕಿ ತಗುಲಿದೆ ಎಂದು ತಿಳಿದಿದೆ.