ಹೈದರಾಬಾದ್: ಸಿಎಸ್ಕೆ ತಂಡದ 166 ರನ್ ಸವಾಲು ಬೆನ್ನಟ್ಟಲು ನಿಂತ ಸನ್ರೈಸರ್ಸ್ಗೆ ಅಭಿಷೇಕ್ ಶರ್ಮ (37 ರನ್, 12 ಎಸೆತ, 3 ಬೌಂಡರಿ, 4 ಸಿಕ್ಸರ್), ಮುಕೇಶ್ ಚೌಧರಿ ಎಸೆದ ಇನಿಂಗ್ಸ್ನ 2ನೇ ಓವರ್ನಲ್ಲೇ 3 ಸಿಕ್ಸರ್, 2 ಬೌಂಡರಿ ಸಹಿತ 27 ರನ್ ತಂದುಕೊಟ್ಟರು. ಈ ಮೂಲಕ ಸನ್ರೈಸರ್ಸ್ ಗೆಲುವಿನ ಹಾದಿ ಸುಗಮಗೊಳಿಸಿದ ಅಭಿಷೇಕ್ ಗೆಲುವಿನ ರೂವಾರಿ ಎನಿಸಿದರು. ಇದಕ್ಕೆ ಪ್ರತಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದ ಅಭಿಷೇಕ್, ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿ ಧನ್ಯವಾದ ಹೇಳಿದರು.
ಪಂಜಾಬ್ನವರೇ ಆದ ಅಭಿಷೇಕ್ ಸಮಯ ಸಿಕ್ಕಾಗ ಚಂಡೀಗಢದಲ್ಲಿ ಯುವರಾಜ್ ಮಾರ್ಗದರ್ಶನದಲ್ಲೇ ತರಬೇತಿ ಪಡೆಯುತ್ತಾರೆ. ಹೀಗಾಗಿ ತನ್ನ ತಂದೆ, ಸನ್ರೈಸರ್ಸ್ ಮಾಜಿ ಕೋಚ್ ಬ್ರಿಯಾನ್ ಲಾರಾ ಜತೆಗೆ ಯುವರಾಜ್ಗೂ ಅಭಿಷೇಕ್ ತನ್ನ ಯಶಸ್ಸಿನ ಕ್ರೆಡಿಟ್ ನೀಡಿದ್ದಾರೆ.
ಟ್ರಾವಿಡ್ ಹೆಡ್ (31) ಜತೆಗೂಡಿ ಅಭಿಷೇಕ್ ಮೊದಲ ವಿಕೆಟ್ಗೆ 46 ರನ್ ಸೇರಿಸಿದರು. ಇದರಿಂದ ಸನ್ರೈಸರ್ಸ್ ಪವರ್ಪ್ಲೇನಲ್ಲೇ 78 ರನ್ ಕಲೆಹಾಕಿತು. ನಂತರ 84 ಎಸೆತಗಳಲ್ಲಿ 88 ರನ್ ಗಳಿಸಬೇಕಾಗಿದ್ದ ಸನ್ರೈಸರ್ಸ್ 18.1 ಓವರ್ಗಳಲ್ಲೇ 4 ವಿಕೆಟ್ಗೆ 166 ರನ್ ಕಲೆಹಾಕಿ, ಸಿಎಸ್ಕೆ ತಂಡಕ್ಕೆ ಸತತ 2ನೇ ಸೋಲುಣಿಸಿತು. ಏಡನ್ ಮಾರ್ಕ್ರಮ್ (50) ಅರ್ಧಶತಕದಾಟವೂ ಸನ್ರೈಸರ್ಸ್ ಗೆಲುವಿಗೆ ಸಹಕಾರಿಯಾಯಿತು.
ಎಕ್ಸ್ನಲ್ಲಿ ಪ್ರತಿಕ್ರಿಯಿಸಿ ಅಭಿಷೇಕ್ ಆಟವನ್ನು ಪ್ರಶಂಸಿಸಿರುವ ಯುವರಾಜ್, ಕೆಟ್ಟ ಹೊಡೆತಕ್ಕೆ ಔಟ್ ಆಗಿದ್ದಕ್ಕೂ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್ಸಿಬಿ: ಅಬ್ಬರಿಸಿದ ಬಟ್ಲರ್