More

    100 ಬಾರಿ ರಕ್ತದಾನ ಮಾಡಿದ ಅಭಿನವ ಗಿರಿರಾಜ್‌ಗೆ ಜೇಸಿ ಸಾರ್ಥಕ ಸಾಧನ ಪ್ರಶಸ್ತಿ

    ಎನ್.ಆರ್.ಪುರ: ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಅಭಿನವ ಗಿರಿರಾಜ್ 100 ಬಾರಿ ರಕ್ತದಾನ ಮಾಡಿರುವುದು ಜೇಸಿ ಸಂಸ್ಥೆಯ ಹೆಮ್ಮೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ತಿಳಿಸಿದರು.

    ಜೇಸಿ ಸಂಸ್ಥೆಯ ಮಾಸಿಕ ಸಭೆಯಲ್ಲಿ 100 ಬಾರಿ ರಕ್ತದಾನ ಮಾಡಿದ ಕಲಾವಿದ, ಮಾಜಿ ಅಧ್ಯಕ್ಷ ಅಭಿನವ ಗಿರಿರಾಜ್ ಅವರಿಗೆ ಜೇಸಿ ಸಾರ್ಥಕ ಸಾಧನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು, ಅನೇಕ ಬಾರಿ ತುರ್ತು ಸಂದರ್ಭದಲ್ಲಿ ರಕ್ತನಿಧಿ ಕೇಂದ್ರದ ಸಿಬ್ಬಂದಿ ಸಿಕ್ಕಾಗ ಗಿರಿರಾಜ್ ಅವರು ರಕ್ತ ನೀಡಿ ಜೀವ ಉಳಿಸಿದ್ದಾರೆ ಎನ್ನುತ್ತಾರೆ. ಇತ್ತೀಚೆಗೆ ಗಿರಿರಾಜ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಬೃಹತ್ ರಕ್ತದಾನ ಶಿಬಿರ ನಡೆಸಿ 60 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದರು.
    ಜೇಸಿ ಸಂಸ್ಥೆಯ ನಿರ್ದೇಶಕ ಹೊನ್ನೇಕೊಡಿಗೆ ಎಲ್ದೋ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅಭಿನವ ಗಿರಿರಾಜ್ ರಕ್ತದಾನ ಜತೆಗೆ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ ಎಂದರು.
    ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅಭಿನವ ಗಿರಿರಾಜ್, ಜೇಸಿ ಸಂಸ್ಥೆಯವರು ಸನ್ಮಾನ ಮಾಡಿರುವುದು ಸಂತಸ ತಂದಿದೆ. ರಕ್ತದಾನ ಅತಿ ಶ್ರೇಷ್ಠವಾದ ದಾನ. ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದರು.
    ಜೇಸಿ ವಲಯ ಅಧಿಕಾರಿ ಚರಣರಾಜ್, ಕಾರ್ಯದರ್ಶಿ ವಿನೂತ್, ಖಜಾಂಚಿ ಜೀವನ್, ಉಪಾಧ್ಯಕ್ಷ ಜಿ.ಪುರುಷೋತ್ತಮ್, ಅಪೂರ್ವಾ ರಾಘು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts