ಮೈಸೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಟಿ.ಕೆ.ಲೇಔಟ್ ನಿವಾಸಿ ಜೀವನ್ (27) ಮೃತ. ಎರಡು ವರ್ಷದಿಂದ ಪ್ಯಾನಕ್ರಿಯಾಸ್ ನಿಂದ ಬಳಲುತ್ತಾ, ಜೀವನ್ ಚಿಕಿತ್ಸೆ ಪಡೆಯುತ್ತಿದ್ದರು.
ಇದರಿಂದ ಮನನೊಂದು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.