More

    ಯುವತಿಗೆ ವಂಚಿಸಿದ್ದ ಯುವಕ ಬಂಧನ

    ಯಳಂದೂರು: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ್ದ ಯುವಕನ್ನು ಯಳಂದೂರು ಪೊಲೀಸರು ಬಂಧಿಸಿದ್ದಾರೆ.

    ತಾಲೂಕಿನ ಕೃಷ್ಣಪುರ ಗ್ರಾಮದ ಉಪ್ಪಾರ ಬೀದಿಯ ನಿವಾಸಿ ನಾಗಶೆಟ್ಟಿ ಅವರ ಪುತ್ರ ಮಹೇಶ್ (28) ಬಂಧಿತ ಆರೋಪಿ. ಈತ
    ಕಳೆದ 3 ವರ್ಷದಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಿ ಶನಿವಾರದ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ರಾವಣಿ ಗ್ರಾಮದ ಆರ್.ಎನ್.ಪ್ರೇಮಕುಮಾರಿ (23) ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2021ರಲ್ಲಿ ಮಹೇಶ್ ಮಳ್ಳವಳ್ಳಿ ತಾಲೂಕಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದು, ಕಟ್ಟಿಸುವ ಕೆಲಸ ಮಾಡುತ್ತಿದ್ದ. ಈ ವೇಳೆ ಸಾಲ ಕೊಡಿಸುವುದಾಗಿ ಮೊಬೈಲ್ ನಂಬರ್ ಪಡೆದುಕೊಂಡು ಫೋನ್ ಮಾಡುತ್ತಿದ್ದ. ನಂತರ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

    ಅಲ್ಲದೆ ನಾನು ಹೊಸದಾಗಿ ಕೆಲಸ ಪ್ರಾರಂಭಿಸಲು ಹಣ ಬೇಕೆಂದು 2 ಲಕ್ಷ ರೂ. ಪಡೆದು, ಜತೆಗೆ ನನ್ನ ತಾತನಿಗೆ ಹುಷಾರಿಲ್ಲ ಎಂದು ಮತ್ತೆ 50 ಸಾವಿರ ರೂ. ಪಡೆದುಕೊಂಡಿದ್ದಾನೆ. 2023ರ ಡಿ.28ರಿಂದ ಮಹೇಶ್ ಮೊಬೈಲ್ ನಂಬರ್ ಸ್ವೀಚ್ ಆಫ್ ಬರುತ್ತಿದೆ. ಈ ಬಗ್ಗೆ ವಿಚಾರಿಸಲು ಮಾ.23ರಂದು ನಾನು ಕೃಷ್ಣಪುರ ಗ್ರಾಮದ ಮಹೇಶ್ ಮನೆಗೆ ಹೋಗಿದಾಗ ಮಹೇಶ್, ಅವರ ತಾಯಿ-ತಂದೆ, ಅಜ್ಜಿ, ಮಾವಂದಿರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts