ಹುಣಸೂರು: ಮಗ ಮತ್ತು ಚಿಕ್ಕಮ್ಮ ಇಬ್ಬರೂ ಕಾಮದ ಕಣ್ಣಲ್ಲಿ ತಾಯಿ-ಮಗನ ಸಂಬಂಧ, ಬಾಂಧವ್ಯದ ಅರ್ಥವೇ ಗೊತ್ತಿಲ್ಲದಂತೆ ವರ್ತಿಸಿ ದುರಂತ ಅಂತ್ಯ ಕಂಡಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಮರಳಯ್ಯನಕೊಪ್ಪಲು ಗ್ರಾಮದ ಶಿವರುದ್ರೇಗೌಡರ ಪುತ್ರ ಕುಮಾರ(28) ಮತ್ತು ಶಿವರುದ್ರೇಗೌಡರ ಸಹೋದರ ಬೀರೇಗೌಡರ ಪತ್ನಿ ಶೀಲಾ(35) ಮೃತ ದುರ್ದೈವಿಗಳು. ಸಂಬಂಧದಲ್ಲಿ ತಾಯಿ-ಮಗ ನಂತಿರಬೇಕಿದ್ದ ಇವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರಂತೆ. ಇದು ಮನೆಯವರಿಗೆ ಗೊತ್ತಾಗಿದೆ.
ಎಲ್ಲಿ ಊರಿನವರಿಗೆಲ್ಲ ಗೊತ್ತಾಗುತ್ತೋ ಎಂದು ಹೆದರಿದ ಈ ಜೋಡಿ ಸೆ.9ರಂದು ಉದ್ದೂರು ನಾಲಾ ವ್ಯಾಪ್ತಿಯ ಹೊನ್ನೇಗೌಡನ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಇವರಿಬ್ಬರೂ ಕೆರೆಗೆ ಹಾರುತ್ತಿರುವ ದೃಶ್ಯ ಪಕ್ಕದ ತೋಟದ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಕುಮಾರನ ಮೃತದೇಹ ಸಿಕ್ಕಿದ್ದು, ಶನಿವಾರ ಬೆಳಗಿನ ಜಾವ ಶೀಲಾಳ ಶವ ಪತ್ತೆಯಾಗಿದೆ.
ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇತ್ತು. ಈ ವಿಷ್ಯ ಎಲ್ಲರಿಗೂ ಗೊತ್ತಾದರೆ ಮರ್ಯಾದೆ ಹೋಗುತ್ತೆ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತ ಯುವಕನ ತಂದೆ ಶಿವರುದ್ರೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ… ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್
ಮೈಸೂರಲ್ಲಿ 93 ದೇವಾಲಯಗಳಿಗೆ ನೆಲಸಮಕ್ಕೆ ಸಜ್ಜು! ಮಹಾನಗರ ಪಾಲಿಕೆಯ ಲಿಸ್ಟ್ಗೆ ಜನ ಶಾಕ್