ಹುಬ್ಬಳ್ಳಿ: ಫುಡ್ ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋದು ನನಗೆ ನಾಚಿಕೆ ಆಗ್ತಿದೆ. ಆದ್ರೆ ಇವತ್ತಿನ ಚೀಪ್ ಪಾಲಿಟಿಕ್ಸ್ನಲ್ಲಿ ಸಿಕ್ಕಾಕೊಂಡಿದ್ದೀನಿ. ಇದು ಇಂದಿನ ರಾಜಕೀಯ ಅನಿವಾರ್ಯತೆಗೆ ಹಿಡಿದ ಕನ್ನಡಿ… ಎನ್ನತ್ತಲೇ ಮಾಜಿ ಸಚಿವ ಸಂತೋಷ್ ಲಾಡ್ ಕಣ್ಣೀರಿಟ್ಟರು.
ಕಲಘಟಗಿ ತಾಲೂಕಿನ ಕೂಡಲ್ಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ ಭಾವುಕರಾದ ಸಂತೋಷ್ ಲಾಡ್, ಆಹಾರದ ಕಿಟ್ಟು ಬಡವರ ಜತೆ ಫೋಟೋ ತೆಗೆಸಿಕೊಳ್ಳಲು ನನಗೆ ಬೇಸರ ಆಗುತ್ತೆ. ಇಂತಹ ಸಂಕಷ್ಟದಲ್ಲೂ ಪ್ರಚಾರ ಪಡೆಯಬಾರದು. ಇದನ್ನು ಆತ್ಮಸಾಕ್ಷಿ ಒಪ್ಪಲ್ಲ, ಆ ದೇವರು ಕೂಡ ಮೆಚ್ಚಲ್ಲ, ಫುಡ್ ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋದು ನನಗೆ ನಾಚಿಕೆ ಆಗ್ತಿದೆ ಎಂದು ಕಣ್ಣೀರಿಟ್ಟರು.
ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ! ಹೆತ್ತವರ ಸಾಥ್, ಮಧುಗಿರಿ ಗೌರಿಗಾಗಿ ಹುಡುಕಾಟ
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್ ಚಾಲಕ! ಮುಂದಾಗಿದ್ದು ದುರಂತ