ಮೈಸೂರು: ನಾನು ಯಾವುದೇ ಬ್ಲ್ಯಾಕ್ಮೇಲ್ಗೂ ಹೆದರಲ್ಲ. ರೋಹಿಣಿ ಸಿಂಧೂರಿ ಆಗಲಿ, ಮನೀಶ್ ಮೌದ್ಗಿಲ್ ಆಗಲಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಇದು ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವಿನ ಹೋರಾಟ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನನ್ನ ಇದುವರೆಗಿನ ಸಾರ್ವಜನಿಕ ಬದುಕಿನಲ್ಲಿ ನಾನು ಎಂದೂ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದೇ ಒಂದನ್ನು ಸಾಬೀತು ಮಾಡಿದರೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಸಾರ್ವಜನಿಕ ಬದುಕಿನಿಂದ ದೂರವಾಗುವೆ ಎಂದು ಐಎಎಸ್ ಅಧಿಕಾರಿಗಳಿಬ್ಬರ ವಿರುದ್ಧ ಶಾಸಕ ಸಾರಾ ಮಹೇಶ್ ಗುಡುಗಿದ್ದಾರೆ.
ನಾನು, ನನ್ನ ಹೆಂಡತಿ, ಇಬ್ಬರು ಮಕ್ಕಳು ಇದ್ದೇವೆ. ನಮ್ಮ ಬಳಿ ಆಸ್ತಿ ಎಷ್ಟಿದೆ? ಸಾಲ ಎಷ್ಟಿದೆ? ಅಂತ ಘೋಷಣೆ ಮಾಡಿಕೊಂಡಿದ್ದೇನೆ. ಸಾರ್ವಜನಿಕವಾಗಿಯೂ ಮಾಹಿತಿ ಸಿಗುತ್ತೆ. ಆದ್ರೆ, ರೋಹಿಣಿ ಸಿಂಧೂರಿ ಐಎಎಸ್ ಅಧಿಕಾರಿ ಆಗುವುದಕ್ಕೂ ಮುಂಚೆ ಅವರ ಬಳಿ ಆಸ್ತಿ ಎಷ್ಟಿತ್ತು? ಅವರ ತಂದೆ ಮತ್ತು ಗಂಡನ ಹೆಸರಲ್ಲಿ ಈಗ ಎಷ್ಟು ಆಸ್ತಿ ಇದೆ? ಅಂತ ಮಾಹಿತಿ ಬಹಿರಂಗ ಪಡಿಸಲು ನಿಮ್ಮ ಶಿಷ್ಯಗೆ ಹೇಳಿ ಮೊದಲು ಎಂದು ಮನೀಶ್ ಮೌದ್ಗಿಲ್ ವಿರುದ್ಧ ಮಹೇಶ್ ಕಿಡಿಕಾರಿದರು.
ಬ್ಯಾಗ್ ಖರೀದಿಯಲ್ಲಿ ಅಕ್ರಮ ಆಗಿದೆ. ಅದನ್ನು ನೋಡಿಯೂ ನಾವು ಸುಮ್ಮನೆ ಕೂರಬೇಕಾ? ನಿಮ್ಮ ಶಿಷ್ಯೆ ಬ್ಯಾಗ್ನಲ್ಲಿ ಹೊಡೆಯಲು ಹೋಗಿದ್ದು ಎಷ್ಟು? ಎಂದು ಮನೀಷ್ ಮೌದ್ಗಿಲ್ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ ನಡೆಸಿದರು.
ಮಹೇಶ್ ಅವರಿಗೆ ಸಂಬಂಧಿಸಿದ ಭೂಮಿಯನ್ನು ಸರ್ಕಾರದ ಆಸ್ತಿಯನ್ನು ಸಂರಕ್ಷಿಸುವ ದೃಷ್ಟಿಯಿಂದ ಸರ್ವೇ ಮಾಡುತ್ತಿರುವುದಾಗಿ ಮನೀಷ್ ಮೌದ್ಗಿಲ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕೌಂಟರ್ ಕೊಟ್ಟ ಸಾರಾ ಮಹೇಶ್, ಅದು ಸರ್ಕಾರಿ ಜಾಗನಾ ಎಮದು ಮೊದಲು ಮಾಹಿತಿ ಪಡೆದುಕೊಳ್ಳಿ. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ನಿಮ್ಮ ಶಿಷ್ಯೆಗಾಗಿ ಆದೇಶ ಮಾಡಿದ್ದೀರಿ. ಸರ್ಕಾರಿ ಆರ್ಟಿಸಿ ತೆಗೆದಾಗ ಗೋಮಾಳ ಇಲ್ಲ ಅಂತ ಗೊತ್ತಾಗಿದೆ. ಅಕ್ಕ ಪಕ್ಕದವರ ಅರ್ಜಿ ಇಲ್ಲದಾಗ ಸರ್ವೇ ಮಾಡಲು ಅವಕಾಶವಿಲ್ಲ. ಆದರೂ ನಾನೇ ನಿಮ್ಮನ್ನು ಸ್ವಾಗತಿಸುತ್ತೇನೆ. ನಿಮ್ಮ ಕುಚುಕು-ಕುಚುಕು ಶಿಷ್ಯೆಗಾಗಿ ಆದೇಶ ಮಾಡಿದ್ದೀರಲ್ಲ ನೀವೆ ಬನ್ನಿ ಎಂದು ಲೇವಡಿ ಮಾಡಿದರು.
ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…
ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…
ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ