More

    ಮೊದಲು ಹಣ… ಉಳಿದಿದ್ದೆಲ್ಲಾ ನಂತರ; ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ!

    ದಾವಣಗೆರೆ: ಅವರು ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಗುಜರಾತ್​ನಿಂದ ಇಬ್ಬರು ಯುವತಿಯರನ್ನು ದಾವಣಗೆರೆಗೆ ಕರೆತಂದಿದ್ದರು. ಯುವತಿಯರು ಹಣಕ್ಕಾಗಿ ಯಾರ ಜತೆಗೂ ಮಲಗಲು ಸಿದ್ದರಿದ್ದರು. ಹೀಗಾಗಿ ಇವರನ್ನು ಕರೆತಂದಿದ್ದವರು ಶಿವಮೊಗ್ಗ ಮೂಲದ ಇಬ್ಬರು ವ್ಯಕ್ತಿಗಳೊಂದಿಗೆ ವೇಶ್ಯಾವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದರು.

    ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ಗುಜರಾತ್ ಮೂಲದ ಯುವತಿರು ಹಾಗೂ ವೇಶ್ಯಾವಾಟಿಕೆಗೆ ಕರೆಸಿದ್ದವರ ನಡುವೆ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಾದ ಯುವತಿಯರು ದಾವಣಗೆರೆಗೆ ಕರೆಯಿಸಿ ವೇಶ್ಯಾವಾಟಿಕೆ ಯತ್ನಿಸಿದ ಕುರಿತು ಪೊಲೀಸ್ ದೂರು ನೀಡಿದ್ದಾರೆ. ಸದ್ಯ ಹಣದ ವಿಚಾರವಾಗಿ ಆರಂಭವಾದ ಜಗಳದಿಂದ ನಡೆಯಬೇಕಿದ್ದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.

    ಸದ್ಯ ಈ ಘಟನೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ದಾವಣಗೆರೆಯ ಯೋಗೀಶ್ ಕುಮಾರ್ ನಾಯ್ಕ್, ಹೇಮರಾಜ್‌‌ ಎಂಬುವವರು ಬೆಣ್ಣೆ ನಗರಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿದ್ದರು. ಇದಕ್ಕಾಗಿ ಈ‌ ಮೊದಲೇ‌ ಯೋಗೀಶ್ ಜೊತೆ ಪೋನ್‌ ಸಂಪರ್ಕದಲ್ಲಿದ್ದ ಗುಜರಾತ್ ಯುವತಿಯರನ್ನು ದಾವಣಗೆರೆ ಕರೆಸಿದ್ದರು. ತಾವು ಹೇಳಿದ ವ್ಯಕ್ತಿಗಳೊಂದಿಗೆ ಮಲಗುವಂತೆ ಇಬ್ಬರು ಕಿಂಗ್​ಪಿನ್​ಗಳು ಯುವತಿಯರಿಗೆ ಸೂಚಿಸಿದ್ದಾರೆ. ಅಂತೆಯೇ ಹಣಕ್ಕಾಗಿ ಯುವತಿಯರು, ಅವರು ಹೇಳಿದವರೊಂದಿಗೆ ಮಲಗಲು ತಯಾರಾಗಿದ್ದರು.

    ಅದರಂತೆ ಕಿರಾತಕರಿಬ್ಬರು ಶಿವಮೊಗ್ಗ ಮೂಲದ ಹರೀಶ್ ಮತ್ತು ಮಂಜುನಾಥ ಬಳಿ ಯುವತಿಯರನ್ನು ಕಳುಹಿಸಿದ್ದಾರೆ. ಈ ವೇಳೆ ದೈಹಿಕ ಸಂಪರ್ಕ ಸಾಧಿಸುವ ಮುನ್ನ ಹಣ ನೀಡುವಂತೆ ಯುವತಿಯರು ಪಟ್ಟು ಹಿಡಿದಿದ್ದಾರೆ. ಕೆಲಸ ಮುಗಿದ ಮೇಲೆ‌ ಹಣ ನೀಡುವುದಾಗಿ ಮಂಜು ಮತ್ತು ಹರ್ಷ ಹೇಳಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವತಿಯರು ದಾವಣಗೆರೆಯ ವಿದ್ಯಾನಗರದ ಬಸ್ ನಿಲ್ದಾಣದಲ್ಲಿ‌ ಗಲಾಟೆ ಮಾಡಿದ್ದಾರೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಓರ್ವ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ಗೆ ಗಾಯವಾಗಿದೆ. ಸದ್ಯ ಇಬ್ಬರು ಯುವತಿಯರು ಹಾಗೂ ಮಂಜುನಾಥ್​ ಮತ್ತು ಹರ್ಷಾ ಎಂಬುವರನ್ನು ಬಂಧಿಸಿ, ನಾಲ್ವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts