More

    150 ಮೀ. ಉದ್ದದ ತಿರಂಗಾ ಮೆರವಣಿಗೆ

    ಲಕ್ಷೆ್ಮೕಶ್ವರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಎಬಿವಿಪಿ ಸಂಘಟನೆ ಸದಸ್ಯರು ಶಾಲಾ- ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ 150 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಗುರುವಾರ ಮೆರವಣಿಗೆ ಮಾಡಿದರು.

    ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಿಸಿಎನ್ ಪಿಯು ಕಾಲೇಜಿನಿಂದ ತ್ರಿವರ್ಣ ಧ್ವಜದ ಮೆರವಣಿಗೆ ಆರಂಭಿಸಿ ಎಪಿಎಂಸಿ, ಪಂಪ ಸರ್ಕಲ್, ವಿದ್ಯಾರಣ್ಯ ಸರ್ಕಲ್, ಹಾವಳಿ ಆಂಜನೇಯ ದೇವಸ್ಥಾನ, ಮುಖ್ಯ ಬಜಾರ ರಸ್ತೆ, ಶಿಗ್ಲಿ ಸರ್ಕಲ್ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಹತ್ತಿರ ಸಂಪನ್ನಗೊಂಡಿತು. ಮೆರವಣಿಗೆಯುದ್ದಕ್ಕೂ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾರತ ಮಾತಾಕಿ ಜೈ, ವಂದೇ ಮಾತರಂ ಘೊಷಣೆ ಕೂಗಿದರು. ಶಿಗ್ಲಿಯ ಜಾಂಜ್ ಮೇಳ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

    ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ ಮೆರವಣಿಗೆಗೆ ಚಾಲನೆ ನೀಡಿದರು. ಎಬಿವಿಪಿ ಜಿಲ್ಲಾ ಸಂಚಾಲಕ ರವಿ ಮಾನ್ವಿ, ಸಚಿನ ಮಡಿವಾಳರ, ಸಿದ್ದು ಹಿರೇಮಠ, ಮಹಾಂತೇಶ ಮನಕವಾಡ, ವಿಜಯಕುಮಾರ ಹತ್ತಿಕಾಳ, ಆರ್​ಎಸ್​ಎಸ್ ಸಂಚಾಲಕ ರಾಜು ಅರಳಿ, ಅಯ್ಯನಗೌಡ ಪಾಟೀಲ, ಶಂಭು ಹಾದಿಮನಿ, ಕೃಷ್ಣ ನವಲೆ, ಮುತ್ತು ಕರ್ಜಕಣ್ಣನವರ, ಅರುಣ ಮೆಕ್ಕಿ, ಮಹಾಂತೇಶ ಗೋಡಿ, ಪ್ರವೀಣ ಬೋಮಲೆ, ಸೋಮೇಶ ಉಪನಾಳ, ಶಿಕ್ಷಕ ಶಂಕರ ಬಡಿಗೇರ, ಶರಣಪ್ಪ ಅಣ್ಣಿಗೇರಿ, ವಿಜಯ ಬಿಳೆಯಲಿ, ಮಂಜುನಾಥ ಬಂಡಿವಾಡ, ಬಿಸಿಎನ್ ಕಾಲೇಜು, ಪುರಸಭೆ ಮಹಾವಿದ್ಯಾಲಯ, ಪಿಎಸ್​ಬಿಡಿ ಕಾಲೇಜು, ಯುನಿಕ್ ಮತ್ತು ಲಿಟಲ್ ಹಾರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts