More

    ಅಪ್ಪಾಜಿಗೌಡ್ರ ಮಾತಿಗೆ ವೇದಿಕೆಯಲ್ಲೇ ಸಚಿವ ನಾರಾಯಣಸ್ವಾಮಿ ಆಕ್ಷೇಪ! ಯಾಕೆ ಈ ರೀತಿ ಹೇಳ್ತೀರಿ? ಎಂದು ತರಾಟೆ

    ಮಂಡ್ಯ: ಪಾಂಡವಪುರ ತಾಲ್ಲೂಕಿನ ಸಣಬ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆರೆ ತುಂಬಿಸುವ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್​ ಎಂಎಲ್​ಸಿ ಅಪ್ಪಾಜಿಗೌಡ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಸಚಿವ ನಾರಾಯಣಗೌಡ ಸಿಡಿಮಿಡಿಗೊಂಡ ಘಟನೆ ನಡೆದಿದೆ.

    ಕಾರ್ಯಕ್ರಮದಲ್ಲಿ ಅಪ್ಪಾಜಿಗೌಡ ಮಾತನಾಡುತ್ತಾ, ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ 8 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ ಎನ್ನುತ್ತಿದ್ದಂತೆ ವೇದಿಕೆಯಲ್ಲೇ ಗರಂ ಆದ ನಾರಾಯಣಗೌಡ, ಮಂಡ್ಯ ಜಿಲ್ಲೆಗೆ ಎಚ್​ಡಿಕೆ 8 ಸಾವಿರ ಕೋಟಿ ರೂ. ಅನುದಾನ ಕೊಟ್ಟಿಲ್ಲ. ಮಗನ ಚುನಾವಣೆಯಲ್ಲಿ ಬಾಯಲ್ಲಿ ಹೇಳಿಕೊಂಡು ಬಂದಿದ್ದಷ್ಟೆ. ಯಾಕೆ ಈ ರೀತಿ ಹೇಳ್ತೀರಿ? ಸುಳ್ಳು ಹೇಳಬಾರದು. ಮಂಡ್ಯ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ನಿಮ್ಮವರು 8 ಸಾವಿರ ಕೋಟಿ ರೂ. ಬಿಡುಗಡೆ ಮಾಡೋದಾಗಿ ಹೇಳಿದ್ರು. ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

    ಈ ವೇಳೆ ಸಚಿವ ನಾರಾಯಣಗೌಡರನ್ನು ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ಸಮಾಧಾನ ಮಾಡಿದರು. ಪಕ್ಕದಲ್ಲೇ ಕುಳಿತ್ತಿದ್ದ ಸಚಿವ ಮಾಧುಸ್ವಾಮಿ ನಕ್ಕು ಸುಮ್ಮನಾದರು. ಈ ವಿಡಿಯೋ ವೈರಲ್ ಆಗಿದೆ.

    2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ನ 30-35 ಟಿಕೆಟ್​ ಮಹಿಳೆಯರಿಗೆ ಮೀಸಲು: ಎಚ್​ಡಿಕೆ ಘೋಷಣೆ

    ರಾಯಚೂರಲ್ಲಿ ನವವಿವಾಹಿತೆ ಸೇರಿ ಮೂವರ ಕೊಲೆ! ನಿನ್ನೆ ರಾತ್ರಿ ಮನೆಗೆ ಬಂದ ಆತನಿಂದಲೇ ನಡೆಯಿತು ಘೋರ ಕತ್ಯ

    ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts