More

    ಕಸ ಹಾಕುವ ವಿಚಾರಕ್ಕೆ ಮಾರಾಮಾರಿ: ಸೊಸೆ ಸಾವು, ಅತ್ತೆ ಸ್ಥಿತಿ ಗಂಭೀರ! ಮೈಸೂರಲ್ಲಿ ನೆರೆಮನೆಯವನಿಂದಲೇ ಘೋರ ಕೃತ್ಯ

    ಮೈಸೂರು: ಮನೆ ಬಳಿ ತರಕಾರಿ ತ್ಯಾಜ್ಯ ಸುರಿಯುತ್ತಿದ್ದ ವಿಷಯವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಒಬ್ಬಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೃಷ್ಣರಾಜನರಸಿಂಹಪುರ(ಕೆಎನ್​ ಪುರ) ಬಡಾವಣೆಯಲ್ಲಿ ಸಂಭವಿಸಿದೆ. ಮತ್ತೊಬ್ಬ ಮಹಿಳೆ ಸ್ಥಿತಿ ಗಂಭೀರವಾಗಿದೆ.

    ಕೃಷ್ಣರಾಜನರಸಿಂಹಪುರದ ವಿಜಯ್​ಕುಮಾರ್​ ಅವರ ಪತ್ನಿ ಸುನೀತಾ(35) ಕೊಲೆಯಾಗಿದ್ದು, ತಾಯಿ ಭಾರತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಬಡಾವಣೆಯ ಗಿರೀಶ್​ ಕೊಲೆ ಆರೋಪಿಯಾಗಿದ್ದು, ಈತ ಹಾಗೂ ಇದಕ್ಕೆ ಸಹಕಾರ ನೀಡಿದ ಶಿವರಾಜ್​ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

    ವಿಜಯ್​ಕುಮಾರ್​ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಮಾಡಿ ಉಳಿದ ತರಕಾರಿ ತ್ಯಾಜ್ಯವನ್ನು ಗಿರೀಶ್​ ಮನೆ ಬಳಿಯ ರಸ್ತೆಬದಿ ಸುರಿಯುತ್ತಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಬಹಳ ಹಿಂದಿನಿಂದಲೂ ವಿಜಯ್​ಕುಮಾರ್​ ಹಾಗೂ ಗಿರೀಶ್​ ಕುಟುಂಬದ ನಡುವೆ ಆಗಾಗ್ಗೆ ಜಗಳ ನಡೆದು ಕೆಲವರು ಸಂಧಾನ ನಡೆಸಿದ್ದರು. ಇದೇ ವಿಷಯವಾಗಿ ಬುಧವಾರ ರಾತ್ರಿಯೂ ವಿಜಯ್​ಕುಮಾರ್​ ಪತ್ನಿ ಸುನೀತಾ, ಗಿರೀಶ್​ ಕುಟುಂಬದ ನಡುವೆ ಜಗಳ ಆರಂಭಗೊಂಡಿತು.

    ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಗಿರೀಶ್​ ಮಾರಕಾಸ್ತ್ರದಿಂದ ಸುನೀತಾ ಅವರ ಮೇಲೆ ಹಲ್ಲೆ ಮಾಡಿದ. ಇದನ್ನು ನೋಡಿದ ಭಾರತಿ ಅವರು ಓಡಿ ಬಂದು ಗಿರೀಶ್​ನನ್ನು ತಡೆಯಲು ಯತ್ನಿಸಿದಾಗ ಆಕೆ ಮೇಲೂ ಹಲ್ಲೆ ನಡೆಸಿದ. ಇದಕ್ಕೆ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಶಿವರಾಜ್​ ಸಹಕಾರ ನೀಡಿದ್ದ ಎನ್ನಲಾಗಿದೆ. ತೀವ್ರ ಹಲ್ಲೆಯಿಂದ ಸುನೀತಾ ಸ್ಥಳದಲ್ಲಿಯೇ ಮೃತಪಟ್ಟರೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    10 ವರ್ಷದ ಹಿಂದೆ ವಿಜಯ್​ಕುಮಾರ್​ ಅವರನ್ನು ಮದುವೆಯಾಗಿದ್ದ ಸುನೀತಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಉದಯಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

    ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts