ತಿರುವನಂತಪುರಂ: ಕಳೆದ ವರ್ಷ ಡಿಸೆಂಬರ್ನಲ್ಲಿ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಅರ್ಪಿಸಲಾಗಿದ್ದ ಮಹೀಂದ್ರಾ ಥಾರ್ ಜೀಪ್ ಅನ್ನು ಯುಎಇ ಮೂಲದ ಉದ್ಯಮಿ 43 ಲಕ್ಷಕ್ಕೆ ಖರೀದಿಸಿದ್ದಾರೆ.
ಸೋಮವಾರ ನಡೆದ ಮರುಹರಾಜಿನಲ್ಲಿ ಉದ್ಯಮಿ ವಿಘ್ನೇಶ್ ವಿಜಯಕುಮಾರ್ ಅವರು ಅತಿ ಹೆಚ್ಚು ಬೆಲೆಗೆ ಖರೀದಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 15 ಉದ್ಯಮಿಗಳು ಪಾಲ್ಗೊಂಡಿದ್ದರು.ಮೊದಲ ಹರಾಜಿನಲ್ಲಿ 33 ಲಕ್ಷಕ್ಕೆ ಕರೆಯಲಾಗಿತ್ತು, ಈ ನಂತರ 40.40 ಲಕ್ಷ ಕೊನೆಗೆ 43 ಲಕ್ಷ ರೂ.ಭಾರೀ ಮೊತ್ತಕ್ಕೆ ಖರೀದಿಯಾಗಿದೆ.
ಕೇರಳ ಹೈಕೋರ್ಟ್ ಆದೇಶ ಮೇರೆಗೆ ಈ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ದೇವಾಲಯಕ್ಕೆ ಡಿಸೆಂಬರ್ 4 ರಂದು ಮಹೀಂದ್ರಾ ಸಂಸ್ಥೆಯಿಂದ ಉಡುಗೊರೆಯಾಗಿ ನೀಡಲಾಗಿತ್ತು. ಡಿಸೆಂಬರ್ 18 ರಂದು ನಡೆದ ಮೊದಲ ಹರಾಜು ಪ್ರಕ್ರಿಯೆಯಲ್ಲಿ 15.10 ಲಕ್ಷಕ್ಕೆ ಅಮಲ್ ಮೊಹಮ್ಮದ್ ಅಲಿ ಎಂಬುವವರು ಖರೀದಿಸಿದ್ದರು.
ಆದರೆ ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದಲ್ಲದೇ, ಸಾರ್ವಜನಿಕವಾಗಿ ಮಾಹಿತಿ ನೀಡದೇ ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಂಬ ಆರೋಪ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿತ್ತು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. (ಏಜೆನ್ಸೀಸ್)
ಆರ್ಎಸ್ಎಸ್ ಬಗ್ಗೆ ವೇದಿಕೆಯಲ್ಲಿ ಚರ್ಚಿಸೋಣ ಬನ್ನಿ: ವಿ.ಎಸ್. ಉಗ್ರಪ್ಪಗೆ ಸಿ.ಟಿ.ರವಿ ಆಹ್ವಾನ
ಶಾಕಿಂಗ್..! ಗಂಡ-ಹೆಂಡತಿಯನ್ನು ಕೊಂದು ತಿಂದಿದೆ ಕರಡಿ: ಸೆರೆಯಾಯ್ತು ಭೀಕರ ದೃಶ್ಯ