More

    ತಡರಾತ್ರಿ ಊಟ ಮಾಡಿ ವಾಪಸ್​ ಮನೆಗೆ ಬರುತ್ತಿದ್ದ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

    ಬೆಳಗಾವಿ: ಡಾಬಾವೊಂದರಲ್ಲಿ ಊಟ ಮುಗಿಸಿಕೊಂಡು‌ ಬೈಕ್​ನಲ್ಲಿ ನಗರಕ್ಕೆ‌ ಹಿಂದಿರುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ.

    ಸದಾಶಿವ ನಗರದ ರಚಿತ್​ ಡುಮಾವತ(21) ಮತ್ತು ಚವಾಟಗಲ್ಲಿಯ ಶ್ರೀನಾಥ ಪವಾರ್(21) ಮೃತ ದುರ್ದೈವಿಗಳು. ಇವರಿಬ್ಬರೂ ಸ್ನೇಹಿತರ ಜತೆ ಊಟಕ್ಕೆಂದು ಡಾಬಾಕ್ಕೆ ತೆರಳಿದ್ದರು. ರಚಿತ್​ ಬಿಕಾಂ ಓದುತ್ತಿದ್ದ, ಶ್ರೀನಾಥ ಸಿಎ ಓದುತ್ತಿದ್ದ.

    ಊಟ ಮುಗಿಸಿ ಬೈಕ್​ನಲ್ಲಿ ಮನೆಗೆ ಹಿಂದಿರುಗುವಾಗ ಪಿಬಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬಳಿ‌ ನಿಂತಿದ್ದ ಲಾರಿಗೆ ಡಿಕ್ಕಿ‌‌ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಇವರಿಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

    ಒಂದೇ ಸೀರೆಯಲ್ಲಿ ಸಾವಿನ ಮನೆಯ ಕದ ತಟ್ಟಿದ ತಾಯಿ-ಮಗಳು!

    12 ದಿನದಲ್ಲಿ ಹಸೆಮಣೆ ಏರಬೇಕಿದ್ದ ವಕೀಲ ದುರಂತ ಸಾವು! ಅಜ್ಜಿಯನ್ನ ಮದ್ವೆಗೆ ಕರೆಯಲು ಹೋದವ ಶವವಾಗಿ ಬಂದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts