ಬಾಗೇಪಲ್ಲಿ: ಗಂಡನೊಂದಿಗೆ ವಿಚ್ಛೇದನ ಪಡೆದು ಮಾಜಿ ಪ್ರಿಯಕರನೊಂದಿಗೆ ಲಾಡ್ಜ್ಗೆ ತೆರಳಿದ್ದ ಮಹಿಳೆಯೊಬ್ಬಳು ಅಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್ನೋಟ್ನಲ್ಲಿ ಇಬ್ಬರು ಪುರುಷರೊಂದಿಗಿನ ಅಕ್ರಮ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ್ದಾಳೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ವೀಣಾ(26) ಮೃತ ಮಹಿಳೆ. ಮುಳಬಾಗಿಲಿನ ಮುರಳಿ ಎಂಬಾತನೊಂದಿಗೆ ವೀಣಾಗೆ 8 ವರ್ಷಗಳ ಹಿಂದೆ ವಿವಾಹವಾಗಿತ್ತು. ಕೆಲ ದಿನಗಳ ಹಿಂದೆ ವೀಣಾ, ಆತನೊಂದಿಗೆ ವಿಚ್ಚೇದನ ಪಡೆದಿದ್ದಳು. ನಂತರ ಮಾಜಿ ಪ್ರಿಯಕರ ಮುಳಬಾಗಿಲಿನ ಪುನೀತ್ ಮತ್ತು ಲಕ್ಷ್ಮೀಕಾಂತ್ ಎಂಬುವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಮಾಜಿ ಪ್ರಿಯಕರ ಪುನೀತ್ ಜತೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್ನಲ್ಲಿ ಕೊಠಡಿ ತೆಗೆದುಕೊಂಡು ವೀಣಾ ಉಳಿದುಕೊಂಡಿದ್ದಳು. ನಿನ್ನೆ(ಶುಕ್ರವಾರ) ಅದ್ಹೇನಾಯ್ತೋ ಏನೋ, ಲಾಡ್ಜ್ನ ಕೋಣೆಯಲ್ಲೇ ವೀಣಾಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರ ಜತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿದಿದೆ ಎಂದು ಮರ್ಯಾದೆಗೆ ಅಂಜಿ ನೇಣು ಬಿಗಿದು ಕೊಂಡಿರುವುದಾಗಿ ತಿಳಿಸಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ವೀಣಾಳ ಪ್ರಿಯಕರ ಪುನೀತ್ನನ್ನು ಬಂಧಿಸಿದ್ದಾರೆ.
ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!
ಮದ್ವೆ ಸಂಭ್ರಮ ಬೆನ್ನಲ್ಲೇ ಸೂತಕ ಛಾಯೆ: ಪತ್ನಿ-ಮಗಳ ಜತೆ ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ