ವಿಜಯನಗರ: ಡಾ.ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ 6 ತಿಂಗಳ ಕಳೆದರೂ ಅಭಿಮಾನಿಗಳ ಮನದಲ್ಲಿನ ನೋವು ಮಾತ್ರ ಇನ್ನೂ ಕರಗಿಲ್ಲ. ಅಪ್ಪು ನೆನಪಲ್ಲೇ ಇದ್ದಾರೆ. ಅವರ ಹಲವರು ಪುನೀತ್ರ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ, ಕೆಲವರು ಅಪ್ಪು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಕೆಲವರು ಅಪ್ಪು ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟು ಅವರಲ್ಲಿ ಅಪ್ಪು ಅವರನ್ನ ಕಾಣುತ್ತಿದ್ದಾರೆ. ಬೈಕ್, ಕಾರು, ಆಟೋ ಮೇಲೆ ಕರುನಾಡಿನ ರಾಜಕುಮಾರನ ಫೋಟೋ ಮತ್ತು ಹೆಸರು ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇನ್ನು ಅಪ್ಪು ಅವರಿಂದ ಉಡುಗೊರೆ ಪಡೆದಿದ್ದ ಉಡುಗೊರೆಯನ್ನ ಅಭಿಮಾನಿಗಳಿಗೆ ಜೋಪಾನ ಮಾಡುತ್ತಿದ್ದಾರೆ… ಇದೀಗ ಸಚಿವರೊಬ್ಬರ ಕಚೇರಿಯಲ್ಲಿ ಪುನೀತ್ರ ಜಾಕೆಟ್ಗೆ ಫೋಟೋ ಫ್ರೇಮ್ ಹಾಕಿಸಿ ಇಡಲಾಗಿದೆ.
‘ಅರಸು’ ಸಿನಿಮಾದಲ್ಲಿ ಪುನೀತ್ರಾಜ್ಕುಮಾರ್ ಅವರು ಧರಿಸಿದ್ದ ಜಾಕೆಟ್ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಫೋಟೋ ಫ್ರೇಮ್ ಹಾಕಿಸಿ ಅಪ್ಪನ ಕಚೇರಿಯಲ್ಲಿ ಇಟ್ಟಿದ್ದಾರೆ.
ಅರಸು ಸಿನಿಮಾದಲ್ಲಿ ತಾನು ಧರಿಸಿದ್ದ ಜಾಕೆಟ್ ಅನ್ನು ಪುನೀತ್ ಅವರು ಅಂದು ತನ್ನ ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವಗೆ ಕೊಟ್ಟಿದ್ದರು. ದೊಡ್ಮನೆ ಹುಡ್ಗನ ಪ್ರೀತಿಗೆ ಕಂಡು ಭಾವುಕರಾಗಿದ್ದ ಕಿಚಡಿ ವಿಶ್ವ, ಆ ಜಾಕೆಟ್ ಅನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್ ಅನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದು, ಜಾಕೆಟ್ಗೆ ಫೋಟೋ ಪ್ರೇಮ್ ಹಾಕಿಸಿ ಅಪ್ಪನ ಕಚೇರಿಯಲ್ಲಿ ಮಗ ಇಟ್ಟಿದ್ದಾರೆ.
ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್
ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ