ವಿಜಯನಗರ: ಬಾಳಿ ಬದುಕಬೇಕಿದ್ದ 21 ವರ್ಷದ ಯುವಕನೊಬ್ಬ ಬೈಕ್ಗಾಗಿ ಪ್ರಾಣವನ್ನೇ ಬಿಟ್ಟಿದ್ದಾನೆ.
ಇಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪೊತಲಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಸ್ವಾಮಿ(21) ಮೃತ ದುರ್ದೈವಿ.
ಸ್ವಾಮಿಗೆ ಬೈಕ್ ಅಂದ್ರೆ ಪಂಚಪ್ರಾಣ. ನನಗೂ ಒಂದು ಸ್ವಂತ ಬೈಕ್ ಬೇಕು, ಕೊಡಿಸು ಎಂದು ಅಪ್ಪನ ಬಳಿ ಹಲವು ಬಾರಿ ಕೇಳಿದ್ದ. ಆದರೆ, ಸದ್ಯಕ್ಕೆ ಬೇಡ ಮಗನೆ. ಮುಂದೆ ಕೊಡಿಸುವೆ. ಈಗ ಹಣ ಇಲ್ಲ ಎಂದು ತಂದೆ ಎಷ್ಟೇ ಹೇಳಿದರೂ ಆತ ಮಾತ್ರ ತನ್ನ ಹಠ ಬಿಡಲೇ ಇಲ್ಲ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಸಣ್ಣ ಜಗಳವೂ ಆಗಿತ್ತಂತೆ.
ಬೈಕ್ ಕೊಡಿಸಲಿಲ್ಲ ಎಂದು ಮನನೊಂದ ಮಗ ವಿಷ ಸೇವಿಸಿದ್ದ. ಕೂಡಲೇ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಬದುಕುಳಿಯಲಿಲ್ಲ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯನಾಡಿನಲ್ಲಿ ಮತ್ತೆ ನಕ್ಸಲ್ ಹೆಜ್ಜೆ: ಕರಪತ್ರ ಹಂಚಿ ಸಿಎಂಗೆ ಸವಾಲು ಹಾಕಿದ ನಕ್ಸಲ್ ಪಡೆ
2022ರ ಮಾರ್ಚ್ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ
ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ