ಬಣಕಲ್:ಲಾಕ್ಡೌನ್ನಿಂದ ಮಾಲೀಕ ಸಂಬಳ ನೀಡಲಿಲ್ಲ ಎಂಬ ಕಾರಣಕ್ಕೆ ಕಡೂರಿನಿಂದ ಟಿಪ್ಪರ್ ಲಾರಿ ಕಳವು ಮಾಡಿಕೊಂಡು ಮೂಡಿಗೆರೆಗೆ ಹೊರಟಿದ್ದ ಚಾಲಕನನ್ನು ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಬಂಧಿಸಿ ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.
ಮೂಡಬಿದರೆಯ ರಂಗಪ್ಪ ಎಂಬುವರು ಕಡೂರಿನ ಟಿಪ್ಪರ್ ಮಾಲೀಕರ ಬಳಿ ಡ್ರೖೆವರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟಿಪ್ಪರ್ ಲಾರಿಯನ್ನು ಕಳವು ಮಾಡಿಕೊಂಡು ಮೂಡಿಗೆರೆಗೆ ತೆರಳುತ್ತಿದ್ದಾಗ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಸಿಕ್ಕುಬಿದ್ದಿದ್ದಾನೆ. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದಾಗ ಸಂಬಳ ಕೊಡದ ಕಾರಣ ಟಿಪ್ಪರ್ ತೆಗೆದುಕೊಂಡು ಮೂಡಿಗೆರೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.