ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಗುಡುಗು-ಸಿಡಿಲ ಸಹಿತ ಭಾರಿ ಮಳೆಗೆ ಕಾವೇರಿ ನಗರದ ಲಕ್ಷ್ಮೀದೇವಿ ನಗರದಲ್ಲಿ ಭೂಕುಸಿತ ಸಂಭವಿಸಿದೆ.
ಮೆಜೆಸ್ಟಿಕ್, ಲಾಲ್ಬಾಗ್, ಕೆ.ಆರ್. ಮಾರುಕಟ್ಟೆ, ಯಶವಂತಪುರ ಸೇರಿದಂತೆ ನಗರದ ಬಹುತೇಕ ಕಡೆ ಇಂದು ಬೆಳ್ಳಂಬೆಳಗ್ಗೆ ಒಂದು ಗಂಟೆ ಕಾಲ ನಿರಂತರ ಮಳೆಯಾಯಿತು. ಇದರ ಪರಿಣಾಮ ಲಕ್ಷ್ಮೀದೇವಿ ನಗರದ ವಾರ್ಡ್ ನಂಬರ್ 42ರಲ್ಲಿ ರಸ್ತೆ ಕುಸಿದಿದ್ದು, ವಾಹನಗಳೆಲ್ಲ ನೆಲಕ್ಕುರುಳಿವೆ. ಕೆಲ ವಾಹನ ಬಿರುಕುಬಿಟ್ಟಿರುವ ಮಣ್ಣಿನ ಅಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲ ವಾಹನ ಸಮತಟ್ಟಾದ ಪ್ರದೇಶದಲ್ಲಿನ ಮಣ್ಣು ಕುಸಿದಿದ್ದರಿಂದ ಒಂದೇ ಕಡೆಗೆ ವಾಲಿಕೊಂಡುನಿಂತಿವೆ.
ಮಳೆಯ ರಭಸಕ್ಕೆ ಸುಮಾರು 100 ಮೀಟರ್ ಉದ್ದದ ರಸ್ತೆಯೇ ಕುಸಿದಿದ್ದು, ವಾಹನಗಳಿಗೆ ಹಾನಿಯಾಗಿರುವುದಲ್ಲದೇ, ಸಂಚಾರಕ್ಕೂ ಅಡ್ಡಿಯಾಗಿದೆ. ಕುಸಿದ ರಸ್ತಯನ್ನು ನೋಡಲು ಸ್ಥಳೀಯರು ಧಾವಿಸಿದ್ದು, ಕಳಪೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಆಪಾದಿಸಿದ್ದಾರೆ.
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳ್ಳಂಬೆಳಗ್ಗೆ ರಸ್ತೆಗಿಳಿದಿದ್ದ ಸ್ಥಳೀಯರಿಗೂ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ. ಹಲವೆಡೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ಸಂಚಾರ ದಟ್ಟನೆ ಇಲ್ಲದಿರುವುದರಿಂದ ಹಿಂದಿಗಿಂತ ಹೆಚ್ಚೇನು ಪ್ರಭಾವ ಬೀರಲಿಲ್ಲ. ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಜನರು ಮನೆಯಲ್ಲೇ ಉಳಿದಿರುವುದರಿಂದ ವರುಣನಿಂದ ಜನಜೀವನಕ್ಕೇನು ಹೆಚ್ಚಿನ ತೊಂದರೆಯಾಗಲಿಲ್ಲ.
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕುಸಿದ ರಸ್ತೆ: ವಾಹನಗಳು ಚೆಲ್ಲಾಪಿಲ್ಲಿ
ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಗುಡುಗು-ಸಿಡಿಲ ಸಹಿತ ಭಾರಿ ಮಳೆಗೆ ಕಾವೇರಿ ನಗರದ ಲಕ್ಷ್ಮೀದೇವಿ ನಗರದಲ್ಲಿ ಭೂಕುಸಿತ ಸಂಭವಿಸಿದೆ.#Bengaluru #HeavyRain #RainWater #Landslide #BengaluruRain
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 23, 2020
ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಹಲವೆಡೆ ಗುಡುಗು ಸಿಡಿಲಿನಿಂದೊಡಗೂಡಿ ಧಾರಾಕಾರ ಮಳೆ