ನವದೆಹಲಿ: ಜೆಎನ್ಯು ಮತ್ತು ಕುಲಪತಿ ನಡುವಿನ ಸಂಘರ್ಷಕ್ಕೆ ಕೊನೆ ಹಾಡಲು ಕುಲಪತಿ ಎಂ. ಜಗದೀಶ ಕುಮಾರ್ ಅವರನ್ನು ವಜಾ ಮಾಡುವಂತೆ ಬಿಜೆಪಿ ಹಿರಿಯ ಧುರೀಣ ಮುರಳಿ ಮನೋಹರ ಜೋಷಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಜೋಷಿ ಅವರ ಈ ಸಲಹೆ ಹಲವರ ಹುಬ್ಬೇರುವಂತೆ ಮಾಡಿದೆ.
ಶುಲ್ಕ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರವು ಕುಲಪತಿಗೆ ಎರಡು ಬಾರಿ ತನ್ನ ನಿಲುವನ್ನು ತಿಳಿಸಿತ್ತು. ಆದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
“ಇದು ನಿಜವಾಗಿಯೂ ಅಚ್ಚರಿ ಆಗುವಂತದ್ದು. ಸರ್ಕಾರದ ಪ್ರಸ್ತಾವನೆಯನ್ನು ಈಡೇರಿಸದ ಅಧಿಕಾರಿ ವರ್ತನೆ ಆಶ್ಚರ್ಯ ತಂದಿದೆ. ಇಂತಹ ವರ್ತನೆ ಸಹಿಸಲಾಗುವುದಿಲ್ಲ. ಇಂತವರು ಆ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ನನ್ನ ಅನಿಸಿಕೆ” ಎಂದು ಜೋಷಿ ಗುರುವಾರ ಟ್ವೀಟ್ ಮಾಡಿದ್ದಾರೆ.
ಗುರುವಾರ ಮಧ್ಯಾಹ್ನದಿಂದ ಮಂಡಿ ಹೌಸ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜೆಎನ್ಯು ಪ್ರತಿಭಟನಾಕಾರರು ರಾಷ್ಟ್ರಭವನದತ್ತ ಹೊರಟಿದ್ದರು. ಇವರನ್ನು ಮಾರ್ಗ ಮಧ್ಯದಲ್ಲಿ ಪೊಲೀಸರು ಕಾರು ಮತ್ತು ಬ್ಯಾರಿಕೇಡ್ಗಳನ್ನು ಅಡ್ಡ ಹಾಕಿ ಪ್ರತಿಭಟನಾಕಾರರನ್ನು ತಡೆದಿದ್ದರು.
ಈ ವೇಳೆ ಕೆಲ ವಿದ್ಯಾರ್ಥಿಗಳು ಬ್ಯಾರಿಕೇಡ್ನ್ನು ಹತ್ತಿ ಮುನ್ನುಗ್ಗಲು ಯತ್ನಿಸಿದರು. ಪ್ರತಿಭಟನಾ ನಿರತ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಬಸ್ನಲ್ಲಿ ಕರೆದೊಯ್ಯಲಾಗಿತ್ತು.
ಕುಲಪತಿ ಜಗದೀಶ್ ಕುಮಾರ್ ಅವರು ದೇಶ ವ್ಯಾಪಿಯಲ್ಲಿ ಟೀಕೆಗೊಳಗಾಗಿದ್ದಾರೆ. ಅದೂ ಅವರ ಅವಧಿಯಲ್ಲಿ ಮುಸುಕುಧಾರಿಗಳು ವಿವಿ ಆವರಣ ಪ್ರವೇಶಿಸಿ ದಾಂಧಲೆ ನಡೆಸಿದ್ದು ಕಾರಣವಾಗಿತ್ತು.
ಆ ಸಂದರ್ಭದಲ್ಲಿ ಮುಸುಕುಧಾರಿಗಳನ್ನು ತಡೆಯಲು ಯತ್ನಿಸಲಿಲ್ಲ ಹಾಗೂ ಗೇಟ್ ಬಳಿ ಇದ್ದ ಪೊಲೀಸರಿಗೂ ಮಾಹಿತಿ ತಿಳಿಸಿಲ್ಲ ಎಂಬ ಆರೋಪ ಹೊತ್ತಿದ್ದಾರೆ. (ಏಜೆನ್ಸೀಸ್)
— Murli Manohar Joshi (@drmmjoshibjp) January 9, 2020