ದಾವಣಗೆರೆ : ನಗರದ ಉತ್ಸಾಹಿ ಯುವಕರು ಮಾಡಿರುವ ಸಾಹಸ ಪ್ರಧಾನ ಚಲನಚಿತ್ರ ಡೈಮಂಡ್ ಕ್ರಾಸ್ ಜುಲೈ 27 ರಂದು ರಾಜ್ಯಾದ್ಯoತ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಕೆಲ ಸಾಹಸ ದೃಶ್ಯಗಳನ್ನು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇತ್ತೀಚಿಗೆ ವೀಕ್ಷಿಸಿ, ಯುವಕರ ಪ್ರಯತ್ನವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಾಯಕ ರಜತ್ ಅಣ್ಣಪ್ಪ, ನಟರಾದ ರಾಜು ಮಂಜಪ್ಪ, ಸ್ಮಾರ್ಟ್ ನಾಗು, ರಘು ಬೋಯ್ಕ, ಮನೋಹರ್ ಮನು, ಮಹಾಂತೇಶ್ ಎಂ.ಎಂ.ಜೆ, ಶರತ್ ರೋಜಿ, ಚಿರು ಎಂ.ಜಿ, ರವಿ ಟೋನಿ, ಮಂಜುನಾಥ್, ಆನಂದ್ ಎಸ್,ಢಾಕ್ಯಾ ನಾಯ್ಕ್, ಶೀತಲ್ ಜಿ ನಾಯ್ಕ್, ಅಭಿ ಬಂಜಾರಾ, ಗಿರೀಶ್ ಎಸ್, ಶ್ರೀನಿವಾಸ್ ಚಿನ್ನು ಇದ್ದರು.