ತುಮಕೂರು: ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಸಂಕೇನಪುರದಿಂದ ಹೊಳಲಗುಂದವರೆಗೆ ರಸ್ತೆ ಮಾಡಿರುವುದಾಗಿ ಹೇಳಿದ್ದರು. ಕಾಮಗಾರಿ ಸಂಬಂಧ ಬಿಲ್ ಕೂಡ ಮಾಡಿಕೊಂಡಿದ್ದರು. ಆದರೀಗ ಕಿರಿಯ ಇಂಜಿನಿಯರ್ ಮಾಡಿಸಿದ್ದ ರಸ್ತೆಯೇ ಮಾಯವಾಗಿದೆ!
ಪರಿಣಾಮ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕುಣಿಗಲ್ ಉಪವಿಭಾಗದ ಜೆಇ ಟಿ.ಬಿ.ರವಿಕುಮಾರ್ ತಲೆದಂಡವಾಗಿದೆ. ಕರ್ತವ್ಯಲೋಪ ಹಾಗೂ ನಿರ್ಲಕ್ಷತೆ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ರವಿಕುಮಾರ್ರನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.
2019-20ನೇ ಸಾಲಿನ ನಬಾರ್ಡ್ ಯೋಜನೆಯಡಿ ಅನುಮೋದನೆಗೊಂಡಿದ್ದ ಕಾಮಗಾರಿ 2020ರಂದು ಮಾ.6 ಪೂರ್ಣವಾಗಿದ್ದು, ಮೂರು ವರ್ಷದ ನಿರ್ವಹಣಾ ಅವಧಿ ಹೊಂದಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ರಸ್ತೆಯೇ ಮಾಯವಾಗಿದ್ದು, ಇಂಜಿನಿಯರ್ ಕರ್ತವ್ಯಲೋಪ ದೃಢವಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕುಣಿಗಲ್ ಎಇಇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆಯು ಸಂಪೂರ್ಣ ಹಾಳಾಗಿರುವುದು ಕಂಡುಬಂದಿದೆ.
ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹೈಕೋರ್ಟ್
ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್