ಬೆಂಗಳೂರು: ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಔತಣಕೂಟವನ್ನು ಆಯೋಜಿಸಿದ್ದಾರೆ.
ಬೆಂಗಳೂರಿನ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಬುಧವಾರ ರಾತ್ರಿ ಏಳು ಗಂಟೆಗೆ ಔತಣಕೂಟ ಹಮ್ಮಿಕೊಳ್ಳಲಾಗಿದೆ.
ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯೇ ಔತಣಕೂಟ ಆಯೋಜನೆ ಮಾಡಲಾಗಿತ್ತು. ಆದರೆ ಸಿಎಂ ಬೊಮ್ಮಾಯಿ ಅವರ ಆಪ್ತ ಸ್ನೇಹಿತರೊಬ್ಬರು ನಿಧನರಾದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಔತಣಕೂಟ ರದ್ದಾಗಿತ್ತು.
ಈ ಹಿನ್ನೆಲೆಯಲ್ಲಿ ಬುಧವಾರ ಔತಣಕೂಟವನ್ನು ಸಿಎಂ ಬೊಮ್ಮಾಯಿ ಏರ್ಪಡಿಸಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲನೇ ಬಾರಿಗೆ ಸಚಿವರು, ಶಾಸಕರಿಗೆ ಔತಣಕೂಟ ಆಯೋಜಿಸಿರುವುದು ಗಮನಾರ್ಹ.
ಊಟಕ್ಕೆ ಲೇಟ್ ಆಯಿತೆಂದು ಪತ್ನಿಯ ಮೇಲೆ ಹಲ್ಲೆ ಮಾಡಿದ: ಕೈಮುಗಿದು ಬೇಡಿಕೊಂಡರೂ ಕೊಂದೇ ಬಿಟ್ಟ ಪಾಪಿ ಗಂಡ!
‘ಮಕ್ಕಳನ್ನು ಜೈಲಿಗೆ ಹಾಕಿ 20 ವರ್ಷವಾಯ್ತು, ಏನಾದ್ರೋ ಗೊತ್ತಿಲ್ಲ. ಕಣ್ಮುಚ್ಚುವ ಮುನ್ನ ಒಮ್ಮೆ ನೋಡುವಾಸೆ…’