ಚಿತ್ರದುರ್ಗ:ನಾಡೋಜ ಹಂಪನಾ ರಚಿತ‘ಚಾರುವಸಂತ’ನಾಟಕ ಪ್ರದರ್ಶನವನ್ನು ನ.8ರಂದು ಸಂಜೆ 6ಕ್ಕೆ ತರಾಸು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 40ಕ್ಕೂ ಹೆಚ್ಚು ನುರಿತ ಕಲಾವಿದರ ತಂಡ ಪ್ರದರ್ಶನ ನೀಡಲಿದೆ. ಡಾ.ನಾ.ದಾಮೋದರ ಶೆಟ್ಟಿ ಹಂಪನಾ ಅವರ ಈ ದೇಸಿ ಕಾವ್ಯಕ್ಕೆ ರಂಗರೂಪವನ್ನು ನೀಡಿದ್ದಾರೆ. ಡಾ.ಜೀವನ್ರಾಂಸುಳ್ಯ ಅವರು ನಿರ್ದೇಶಿಸಿದ್ದಾ ರೆ. ವೇದಿಕೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ. ಮಲ್ಲಿಕಾರ್ಜುನ,ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ,ಕಾರ್ಯದರ್ಶಿ ಕೆ.ಪಿ.ಎಂ.ಗಣೇಶ್,ವಿ.ಶ್ರೀನಿವಾಸ್ಮಳಲಿ ಭಾಗವಹಿಲಿದ್ದಾರೆ. ಈ ನಾ ಟಕ ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ.