ಕಲಬುರಗಿ: ಅವರೆಲ್ಲರೂ ಮಹಾರಾಷ್ಟ್ರದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಾಕ್ಡೌನ್ ಏಪ್ರಿಲ್ 14ಕ್ಕೆ ಮುಗಿಯುವ ಬದಲು ಮೇ 3ಕ್ಕೆ ವಿಸ್ತರಣೆಗೊಂಡಿದ್ದರಿಂದ ಬೇಸರಗೊಂಡಿದ್ದರು. ಹಾಗಾಗಿ ಕರ್ನಾಟಕದ ತಮ್ಮ ಊರುಗಳಿಗೆ ಕಾಲ್ನಡಿಗೆ ಮೂಲಕ ಮರಳಲು ನಿರ್ಧರಿಸಿದರು.
ಅದರಂತೆ 15 ವಿದ್ಯಾರ್ಥಿನಿಯರು ಸೇರಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ 39 ವಿದ್ಯಾರ್ಥಿಗಳು ಲಾಥೂರ್ನಿಂದ ಹೊರಟು ಆಲಂದ ತಾಲೂಕಿನ ಕಾಜುರಿ ಸಮೀಪದ ಅಂತರರಾಜ್ಯ ಚೆಕ್ಪೋಸ್ಟ್ ತಲುಪಿದರು. ಅಲ್ಲಿ ಅವರನ್ನು ತಡೆದ ಅಧಿಕಾರಿಗಳು, ವಿಚಾರಣೆ ನಡೆಸಿದರು. ಬಳಿಕ ಆಳಂದದ ಹೊರವಲಯದಲ್ಲಿರುವ ಕೋರಳ್ಳಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಕ್ವಾರಂಟೈನ್ನಲ್ಲಿ ಇರಿಸಲಾಗಿರುವ 39 ವಿದ್ಯಾರ್ಥಿಗಳು ಲಾಥೂರ್ನ ಕೃಷಿ ಮಹಾವಿದ್ಯಾಲಯದಲ್ಲಿ ಆರು ತಿಂಗಳಿನಿಂದ ನಡೆಯುತ್ತಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೌಕ್ಡೌನ್ ಮೇ 3ಕ್ಕೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಆತಂಕಗೊಂಡು, ಕಾಲ್ನಡಿಗೆಯಲ್ಲೇ ತಮ್ಮ ಊರುಗಳನ್ನು ತಲುಪಲು ನಿರ್ಧರಿಸಿ ಬುಧವಾರ ಲಾಥೂರ್ನಿಂದ ಹೊರಟಿದ್ದರು. ಗುರುವಾರ ಇವರೆಲ್ಲರೂ ಕಾಜುರಿ ತಲುಪಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು, ಕ್ವಾರಂಟೈನ್ನಲ್ಲಿ ಇರಿಸಲಾಯಿತು ಎಂದು ಹೇಳಿದ್ದಾರೆ.
ಪಾಕಿಸ್ತಾನದಿಂದ ಕರೊನಾ ಭಯೋತ್ಪಾದನೆ, ಕಾಶ್ಮೀರಕ್ಕೆ ಕೋವಿಡ್ 19 ಸೋಂಕಿತ ಉಗ್ರರ ರವಾನೆ