More

    28ರಂದು ಮರಡಿಹಳ್ಳಿಯಲ್ಲಿ ರಥೋತ್ಸವ


    ಚಿತ್ರದುರ್ಗ: ಹಿರಿಯೂರು ತಾಲೂಕು ಮರಡಿಹಳ್ಳಿಯಲ್ಲಿ ನ.28ರಂದು 57ನೇ ವರ್ಷದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ 57ನೇ ವರ್ಷ ನಡೆಯಲಿದೆ. 26ರಂದು ಬೆಳಗ್ಗೆ 5.30ರಿಂದ ಪುಣ್ಯಾಹ,ದೇವತಾನಂದಿ,ಪಂಚಾಮೃತಾಷೇಕ,ಅಷ್ಟೋತ್ತರ ಮಹಾಪೂಜೆ. ಸಂಜೆ ಪ್ರಾಕಾರ ಉತ್ಸವ. 27 ರಂದು ಬೆಳಗ್ಗೆ 5.30ರಿಂದ ಕ್ಷೀರಾಭಿಷೇಕ,ಮಹಾಪೂಜೆ,ಹೂವಿನ ಅಲಂಕಾರ.
    28ರಂದು ಬೆಳಗ್ಗೆ 5.30ಕ್ಕೆ ಸ್ವಾಮಿಗೆ ಪಂಚಾಮೃತ ಅಭಿಷೇ ಕ,ಹೂವಿನ ಅಲಂಕಾರ. ಬೆಳಗ್ಗೆ 10.30ಕ್ಕೆ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾ ಣ ಮಹೋತ್ಸವ ಹಾಗೂ ಅದೇ ರಾತ್ರಿ 7ಕ್ಕೆ ರಥೋತ್ಸವ ಜರುಗಲಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಗೂ ರಥೋತ್ಸವ ದಿನದಂದು ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ,ಪ್ರಸಾದ ವಿನಿಯೋಗವಿರುತ್ತದೆ. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಭಕ್ತರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದೂ ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಕಡ್ಡಾಯವೆಂದು ದೇವಾಲಯದ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts