ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕ್ಯಾಂಟರ್ ಲಾರಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ 20 ಕ್ಕೂ ಹೆಚ್ಚು ರಾಸುಗಳನ್ನು ರಕ್ಷಿಸಲಾಗಿದೆ. ಪೊಲೀಸರ ಸಹಕಾರದೊಂದಿಗೆ ಜ್ಞಾನ್ ಪೌಂಡೇಶನ್ನ ಗೋರಕ್ಷಕ ಪಡೆಯ ಕಾರ್ಯಕರ್ತರು ಈ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕಳ್ಳನಕೆರೆ ಗ್ರಾಮದ ಬಳಿ ರಾಸುಗಳನ್ನು ಕಟ್ಟಿ ಹಾಕಿ ಕ್ಯಾಂಟರ್ ಲಾರಿ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಾಹನ ಅಡ್ಡಗಟ್ಟಿದ ಪೊಲೀಸರು ಮತ್ತು ಸೇವಾಕರ್ತರು ವಾಹನದ ಪರಿಶೀಲನೆ ನಡೆಸಿದರು. ಲಾರಿಯ ಹಿಂದಿನ ಬಾಗಿಲು ತೆಗೆದು ನೋಡಿದಾಗ ಹಸು ಮತ್ತು ಎಮ್ಮೆಗಳನ್ನು ಹಗ್ಗದಿಂದ ಕಟ್ಟಿ ಸಾಗಿಸುತ್ತಿದ್ದುದ್ದು ಪತ್ತೆಯಾಗಿದೆ.
ಇದನ್ನೂ ಓದಿ: ಬಾಗೇಪಲ್ಲಿ ಬಳಿ ಕೆರೆಗೆ ಉರುಳಿಬಿದ್ದ ಕೆಎಸ್ಆರ್ಟಿಸಿ ಬಸ್: ಆತಂಕದ ವಾತಾವರಣ
ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಮಾರು 20 ರಾಸುಗಳನ್ನು ಕಟುಕರ ಕೈಯಿಂದ ಪಾರು ಮಾಡಲಾಗಿದೆ. ಪೊಲೀಸರಿಗೆ ಬೆದರಿ ವಾಹನ ಚಾಲಕನು, ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಭಾರತ-ಪಾಕ್ ಪಂದ್ಯದ ಫೀಸನ್ನು ಬಾಬರ್ ಅಜಂ ಯಾವುದಕ್ಕೆ ಬಳಸಲಿದ್ದಾರೆ ಗೊತ್ತೆ?