More

    ಪಿಯುಸಿ ಫಲಿತಾಂಶ: ಕುಮಟಾದ ಪೋರ ರಾಜ್ಯಕ್ಕೆ ತೃತೀಯ

    ಕಾರವಾರ: ಕುಮಟಾದ ಧ್ಯಾನ ರಾಮಚಂದ್ರ ಭಟ್ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 600 ಕ್ಕೆ 595 ಅಂಕ ಪಡೆದು ರಾಜ್ಯಕ್ಕೆ 3 ನೇ ಸ್ಥಾನ ಪಡೆದಿದ್ದಾರೆ.
    ನವಿಲಗೋಣ ಮೂಲದ ಧ್ಯಾನ್ ತಂದೆ ರಾಮಚಂದ್ರ ಭಟ್ ದೇವಸ್ಥಾನದ ಅರ್ಚಕರು. ತಾಯಿ ಗೃಹಿಣಿಯಾಗಿದ್ದಾರೆ.

    ‌ ಧ್ಯಾನ್ ಕುಮಟಾದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಓದುತ್ತಿದ್ದಾರೆ. ಸಂಸ್ಕೃತ, ಅರ್ಥಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಕಂಪ್ಯೂಟರ್ ಸೈನ್ಸ್ ನಲ್ಲಿ ಪೂರ್ಣಾಂಕ ಪಡೆದಿದ್ದಾರೆ. ಇಂಗ್ಲಿಷ್ 96 ಹಾಗೂ ಅಕೌಂಟೆನ್ಸಿಗೆ 99 ಅಂಕ ಪಡೆದಿದ್ದಾರೆ.‌

    ಧ್ಯಾನ್ ಯಾವುದೇ ಕೋಚಿಂಗ್ ಪಡೆಯದೇ ಸ್ವತಃ ಓದಿ ಗುರಿ ತಲುಪಿದ್ದಾರೆ. ಪಾಲಕರ, ಶಾಲೆಯವರ ಸಹಕಾರ ಕಾರಣ ಎಂಬುದು ಧ್ಯಾನ್ ಅಭಿಪ್ರಾಯ. ಧ್ಯಾನ್ ಸಿಎ ಮಾಡುವ ಗುರಿ ಹೊಂದಿದ್ದಾರೆ.

    ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ನಾಲ್ಕನೇ ಸ್ಥಾನ ಉಳಿಸಿಕೊಂಡ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts