More

    ಬ್ಯಾಂಕ್ ಖಾತೆಯಿಂದ 2.31 ಲಕ್ಷ ರೂ. ಎಗರಿಸಿದ ವಂಚಕ

    ಹಾಸನ: ಹಾಸನ ತಾಲೂಕು, ಶಾಂತಿಗ್ರಾಮ ಹೋಬಳಿಯ ತಮ್ಲಾಪುರ ಗ್ರಾಮದ ಅಣ್ಣೇಗೌಡ ಎಂಬುವವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದ ಹಾಗೆ 2,31,525 ರೂ. ಹಣ ಡ್ರಾ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅಣ್ಣೇಗೌಡ ಅವರು ಹಾಸನ ನಗರದ ಯೂನಿಯನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ನ.30ರಿಂದ ಡಿ.24ರವರೆಗೆ ಇವರ ಗಮನಕ್ಕೆ ಬಾರದ ಹಾಗೆ 41 ಬಾರಿ ಬ್ಯಾಂಕ್ ಖಾತೆಯಿಂದ ವಂಚಕರು ಹಣ ಡ್ರಾ ಮಾಡಿಕೊಂಡಿದ್ದಾರೆ. ಡಿ.24ರಂದು ಅಣ್ಣೇಗೌಡ ಅವರ ಮೊಬೈಲ್‌ಗೆ 5 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ಇದನ್ನು ನೋಡಿ ಗಾಬರಿಯಾದ ಅಣ್ಣೇಗೌಡ ಅವರು ತಾವು ಖಾತೆ ಹೊಂದಿರುವ ಯೂನಿಯನ್ ಬ್ಯಾಂಕ್‌ಗೆ ಹೋಗಿ ಪಾಸ್‌ಬುಕ್ ಎಂಟ್ರಿ ಮಾಡಿಸಿದಾಗ 25 ದಿನಗಳ ಅವಧಿಯಲ್ಲಿ ಸುಮಾರು 41 ಬಾರಿ ಒಟ್ಟು 2,31,525 ರೂ. ಅವರ ಖಾತೆಯಿಂದ ಡೆಬಿಟ್ ಆಗಿರುವುದು ತಿಳಿದು ಬಂದಿದೆ.

    ಮೋಸದಿಂದ ಹಣ ಡ್ರಾ ಮಾಡಿಕೊಂಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಹಣವನ್ನು ವಾಪಸ್ ಕೊಡಿಸಿಕೊಡುವಂತೆ ಅಣ್ಣೇಗೌಡ ಅವರು ಹಾಸನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts