More

    172 ಕೋಟಿ ರೂ. ಜೆಜೆಎಂ ಕಾಮಗಾರಿ ಪೂರ್ಣ

    ನಿಪ್ಪಾಣಿ: ಜಲಜೀವನ ಮಿಷನ್ ಯೋಜನೆಯಡಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ರೂ.172 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ತಾಲೂಕಿನ ಗೊಂದುಗುಪ್ಪಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ 98.50 ಲಕ್ಷ ರೂ. ಅನುದಾನದಲ್ಲಿ 376 ಮನೆಗಳಿಗೆ ನಳಮಾಪಕ ಯಂತ್ರ ಅಳವಡಿಕೆ, ಆರ್‌ಡಿಪಿಆರ್ ಇಲಾಖೆಯಡಿ 50 ಲಕ್ಷ ರೂ.ಅನುದಾನದಲ್ಲಿ ಸಾರ್ವಜನಿಕ ಬಾವಿಯಿಂದ ಸ್ಮಶಾನ ಭೂಮಿಯವರೆಗಿನ 1.5 ಕಿಮೀ ರಸ್ತೆ ಸುಧಾರಣೆ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 12 ಲಕ್ಷ ರೂ. ಅನುದಾನದಲ್ಲಿ ಪರಿಶಿಷ್ಟರ ಕಾಲನಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿ, ಗ್ರಾಮದಲ್ಲಿ ಇಲ್ಲಿಯವರೆಗೆ 6 ಕೋಟಿ ರೂ. ಮೊತ್ತದ ಅಭಿವದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಬಾಜಿರಾವ ಭೋಸಲೆ, ಪಾಂಡುರಂಗ ಪಾಟೀಲ, ಅನಿತಾ ಸುತಾರ, ಆನಂದ ಪಾಟೀಲ, ಸದಾಶಿವ ಪಾಟೀಲ, ರಘುನಾಥ ದೇಸಾಯಿ, ಪ್ರಕಾಶ ಪಾಟೀಲ, ಶಿವಾಜಿ ಪಾಟೀಲ, ಕೇಶವ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts