More

    ತಬ್ಲಿಗಿ ಜಮಾತ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 14 ಮಂದಿಯ ಬಂಧನ

    ಮೇರಠ್​: ದೆಹಲಿಯ ನಿಜಾಮುದ್ದೀನ್​ನಲ್ಲಿ ಆಯೋಜನೆಗೊಂಡಿದ್ದ ತಬ್ಲಿಗಿ ಜಮಾತ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಂತರ ಕಾಣೆಯಾಗಿ ಮೌಲಾನಾ ಅವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ 14 ಮಂದಿ ಧಾರ್ಮಿಕ ಬೋಧಕರನ್ನು ಪೊಲೀಸರು ಬಂಧಿಸಿದ್ದಾರೆ.

    ನಿಷೇಧಾಜ್ಞೆಯ ಹೊರತಾಗಿಯೂ ದೆಹಲಿಯ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೇಪಾಳ, ಬಿಹಾರ, ದೆಹಲಿ ಮತ್ತು ಮಹಾರಾಷ್ಟ್ರದ ಇವರೆಲ್ಲರೂ ಪಾಲ್ಗೊಂಡಿದ್ದರು. ಕರೊನಾ ವೈರಸ್​ ಸೋಂಕು ಹರಡಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡು ಮೇರಠ್​ಗೆ ಬಂದ ಇವರೆಲ್ಲರೂ ಮೌಲಾನಾ ಅವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು ಎನ್ನಲಾಗಿದೆ.

    ಸದ್ಯ ಇವರೆಲ್ಲರೂ ಅದೇ ಮನೆಯಲ್ಲಿ 14 ದಿನ ಕ್ವಾರಂಟೇನ್​ನಲ್ಲಿ ಇರಿಸಲಾಗುತ್ತಿದೆ. ಇವರೆಲ್ಲರಿಗೂ ಆಶ್ರಯ ನೀಡಿದ ಆರೋಪದಲ್ಲಿ ಮೌಲಾನಾ ವಿರುದ್ಧ ದೂರು ದಾಖಲಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಿಂದ ಬಿಜ್ನೋರ್​ ಮಸೀದಿಗೆ ಹೋಗಿ ಅಡಗಿದ್ದ 8 ವಿದೇಶಿಗರ ಪತ್ತೆ; ಮೌಲ್ವಿ ಸೇರಿ ಐವರ ವಿರುದ್ಧ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts