More

    ಮುನವಳ್ಳಿ, ಬೆಳಗಾವಿ : ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಯರಗಟ್ಟಿ-ಮುನವಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಯಶವಂತ ಯಲಿಗಾರ ಅವರಿಗೆ ಪಟ್ಟಣದ ಮುನವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ರವೀಂದ್ರ ಯಲಿಗಾರ ಮಾತನಾಡಿ, ಮಾಮನಿ ಅವರು ಅಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಪಕ್ಷ ಬೇಧ ಮರೆತು ಸಮಗ್ರ ಅಭಿವೃದ್ಧಿ ಕೈಗೊಂಡಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನಮ್ಮ ಸಹಕಾರಿ ಸಂಘ ಸೇರಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳಿಗೆ ಹೆಚ್ಚಿನ ಪತ್ತು ನೀಡುವ ಮೂಲಕ ರೈತರ ಹಿತ ಕಾಪಾಡಿದ್ದರು. ಅಂಥ ವ್ಯಕ್ತಿಯನ್ನು ಕಳೆದುಕೊಂಡಿರುವ ನಮ್ಮ ಕ್ಷೇತ್ರ ಬಡವಾಗಿದೆ. ಯರಗಟ್ಟಿ-ಮುನವಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿ.ಯಶವಂತ ಯಲಿಗಾರ ಸಹ ಕಿರಿಯ ವಯಸ್ಸಿನಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಸಮಾಜಸೇವೆಗೈಯುತ್ತ ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಕೆಯೂ ಅತೀವ ನೋವು ತಂದಿದೆ ಎಂದು ಸ್ಮರಿಸಿದರು. ಹಿರಿಯರು, ಮುಖಂಡರು ನುಡಿ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಸಂಘದ ಅಧ್ಯಕ್ಷ ಅಂಬರೀಷ ಯಲಿಗಾರ, ಉಪಾಧ್ಯಕ್ಷ ಕಲ್ಲಪ್ಪ ಕಿತ್ತೂರ, ನಿರ್ದೇಶಕರಾದ ಪ್ರಕಾಶ ಕಾಮಣ್ಣವರ, ಅರುಣಗೌಡ ಪಾಟೀಲ, ಅಂದಾನಿ ಗೋಮಾಡಿ, ಸಿಂಗಯ್ಯ ಹಿರೇಮಠ, ಎಂ.ಬಿ.ಬಾಳಿ. ಅರುಣ ಬಾಳಿ, ನಿಂಗನಗೌಡ ಮಲಗೌಡ್ರ, ರಾಜಣ್ಣ ಬಾಳಿ, ಸೋಮಶೇಖರ ಯಲಿಗಾರ, ನಾಗಪ್ಪ ಕಾಮಣ್ಣವರ, ಅಶೋಕ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ದೀಪಕ ಕಮ್ಮಾರ, ಗಂಗಪ್ಪ ನಲವಡೆ, ಕೆ.ಖೊಂದುನಾಯ್ಕ, ಪ್ರವೀಣ ಕವಳಿ ಇದ್ದರು. ಐ.ಕೆ.ಮಠಪತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts