More

    11ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾರ್ಚ್ 4ರಂದು

    ಹುಬ್ಬಳ್ಳಿ: ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಮಾ. 4ರಂದು ಸಂಜೆ 4 ಗಂಟೆಗೆ ನಗರದ ಕ್ಯೂಬಿಕ್ಸ್ ಹೊಟೇಲ್​ನಲ್ಲಿ ಉದ್ಯಮಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜೆ.ಸಿ. ಮಠದ ತಿಳಿಸಿದರು.</p><p>ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ತಲಾ ಇಬ್ಬರಿಗೆ, ಮಹಿಳಾ ಉದ್ಯಮಿ ಹಾಗೂ ಅಸಾಧಾರಣ ಕೈಗಾರಿಕೋದ್ಯಮಿಗಳ ವಿಭಾಗದಲ್ಲಿ ತಲಾ ಇಬ್ಬರಿಗೆ, ಜೀವಮಾನ ಸಾಧನೆಗಾಗಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.</p><p>ಪ್ರಾರಂಭದಲ್ಲಿ ುಬ್ಬಳ್ಳಿ-ಧಾರವಾಡದಲ್ಲಿ ಕೈಗಾರಿಕೆಗಳ ಬೆಳವಣಿಗೆ ಕುರಿತು ತಾಂತ್ರಿಕ ಗೋಷ್ಠಿ ಏರ್ಪಡಿಸಲಾಗಿದೆ. ಫಿಕ್ಕಿ ಕರ್ನಾಟಕ ಚೇರ್ಮನ್ ಕೆ. ಉಲ್ಲಾಸ ಕಾಮತ ಮುಖ್ಯ ಭಾಷಣ ಮಾಡುವರು. ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಒಪ್ಪಂದದ ಬಗ್ಗೆ ಮಾತನಾಡುವರು ಎಂದು ಹೇಳಿದರು. ಬಳಿಕ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ ಕುರಿತು ಸಂವಾದ ನಡೆಯಲಿದೆ. ಡಾ. ವೆಂಕಪ್ಪಯ್ಯ ದೇಸಾಯಿ, ಕೆ. ಉಲ್ಲಾಸ ಕಾಮತ್, ವೇಗಾ ಆಟೋ ಎಕ್ಸಸರೀಸ್ ಪ್ರೖೆವೇಟ್ ಲಿಮಿಟೆಡ್ ಎಂಡಿ ದಿಲೀಪ ಚಂಡಕ್, ಶಾಸಕ ಅರವಿಂದ ಬೆಲ್ಲದ ಪಾಲ್ಗೊಳ್ಳುವರು ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts