ಹಾನಗಲ್ಲ: ತಾಲೂಕಿನ ಹುಲುಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 20ಕ್ಕೂ ಹೆಚ್ಚು ಬ್ಯಾರಲ್ಗಳಲ್ಲಿದ್ದ 10 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಕೊಳೆಯನ್ನು ನಾಶಪಡಿಸಿದ್ದಾರೆ.
ಸಿಪಿಐಗಳಾದ ಪ್ರವೀಣ ನೀಲಮ್ಮನವರ ಮತ್ತು ಚಿದಾನಂದ, ಟಿ. ಮಂಜಣ್ಣ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. 20ಕ್ಕೂ ಅಧಿಕ ಬ್ಯಾರಲ್ಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 10 ಸಾವಿರ ಲೀಟರ್ನಷ್ಟು ಕಳ್ಳಬಟ್ಟಿ ಕೊಳೆ ನಾಶಪಡಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಹುಲಗಿನಕೊಪ್ಪ ಗ್ರಾಮದ ಹೊರವಲಯದಲ್ಲಿನ ಹೊಲದಲ್ಲಿ ಡ್ರಮ್ಳನ್ನು ಇರಿಸಲಾಗಿತ್ತು. ಇದಕ್ಕಾಗಿ ಬಳಸಲಾಗುತ್ತಿದ್ದ 2.50 ಕ್ವಿಂಟಾಲ್ ಬೆಲ್ಲ, ಒಂದು ಟ್ರ್ಯಾಕ್ಟರ್ನಷ್ಟು ಉರುವಲು ಕಟ್ಟಿಗೆ, ಪ್ಲಾಸ್ಟಿಕ್ ಕೊಡಗಳು, ಹಂಡೆಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಬ್ಬಂದಿ ಈರಣ್ಣ ಲಂಗೋಟಿ, ಸುರೇಶ ಕೂಸನೂರ, ಆರ್.ಆರ್. ಬಳ್ಳಾರಿ, ಮಂಜು ಎರೆಶೀಮಿ, ವೆಂಕಟೇಶ ಹಂಚಿನಮನಿ, ಎನ್.ಡಿ. ಮಳಗಾವಿ, ರಫೀಕ್, ಸಂಜೀವ ರೆಡ್ಡೇರ, ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.