More

    ಹಳಿಯಾಳಕ್ಕೆ ಭೇಟಿ ನೀಡಿದ ಇಸ್ರೇಲ್ ಮಾಜಿ ಸಚಿವ

    ಹಳಿಯಾಳ: ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ನಡೆಯುತ್ತಿರುವ ವಿ.ಆರ್.ಡಿ. ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕ್ರಮ ಹಾಗೂ ಚಟುವಟಿಕೆ ವೀಕ್ಷಿಸಲು ಇಸ್ರೇಲ್ ದೇಶದ ಮಾಜಿ ಸಚಿವ, ವಿದೇಶಿ ವ್ಯವಹಾರಗಳ ನಿರ್ದೇಶಕ, ಉದ್ಯಮಿ ಮತ್ತು ಸಲಹೆಗಾರ ಎಲಿಝುರ (ಮೂಡಿ) ಸ್ಯಾಂಡ್​ಬರ್ಗರ್ ದಂಪತಿ ಮಂಗಳವಾರ ಸಂಜೆ ಹಳಿಯಾಳಕ್ಕೆ ಭೇಟಿ ನೀಡಿದ್ದರು.

    ದೇಶಪಾಂಡೆ ಭವನದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವಿ.ಆರ್.ಡಿ. ಟ್ರಸ್ಟ್ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಸಚಿವರ ಭೇಟಿಯ ಸವಿನೆನಪಿಗಾಗಿ ಟ್ರಸ್ಟ್ ಕಚೇರಿ ಆವರಣದಲ್ಲಿ ಗಂಧದ ಸಸಿ ನೆಡಲಾಯಿತು.

    ಟ್ರಸ್ಟ್ ಧಮದರ್ಶಿಗಳೊಂದಿಗಿನ ಸಭೆಯಲ್ಲಿ ಶಾಸಕ ದೇಶಪಾಂಡೆ ಅವರು, ವಿ.ಆರ್.ಡಿ.ಎಂ. ಟ್ರಸ್ಟ್ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಸ್ವ-ಉದ್ಯೋಗಗಳ ತರಬೇತಿ ಕುರಿತು ಮಾಹಿತಿ ನೀಡಿದರು.

    ನಂತರ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ಹಾಗೂ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್​ನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಇಸ್ರೇಲ್ ದೇಶದ ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ ಪದ್ಧತಿ, ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿ ಕುರಿತು ತಿಳಿಸಿದರು.

    ಇಲ್ಲಿಯ ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿದ ಮಾಜಿ ಸಚಿವರು ದೇವಸ್ಥಾನ, ಕಿಲ್ಲಾ ಕೋಟೆ ಹಾಗೂ ಅಲ್ಲಿನ ಪ್ರಾಚೀನ ದೇವಸ್ಥಾನ ವೀಕ್ಷಿಸಿದರು. ವಿ.ಆರ್.ಡಿ.ಎಂ. ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮತ್ತು ಆಡಳಿತಾಧಿಕಾರಿ ಪ್ರಕಾಶ ಪ್ರಭು, ಕೆನರಾ ಬ್ಯಾಂಕ್ ಆರ್​ಸೆಟಿಯ ನಿರ್ದೇಶಕ ನಿತ್ಯಾನಂದ ವೈದ್ಯ, ಡಿಪಿಐಟಿಐನ ಪ್ರಾಚಾರ್ಯ ದಿನೇಶ ನಾಯ್ಕ, ವಿಮಲ ವಿ. ದೇಶಪಾಂಡೆ ಸ್ಕೂಲ್​ಆಫ್​ಎಕ್ಸಲೆನ್ಸ್​ನ ಡಾ. ಸಿ.ಬಿ. ಪಾಟೀಲ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts